ರಾಯಚೂರು: ಇಲ್ಲಿನ ಶ್ರೀರಾಮನಗರದಲ್ಲಿ ಟಿನ್ ಶೆಡ್ ಮನೆಯಲ್ಲಿ ಎರಡು ಸಿಲಿಂಡರ್ಗಳು ಸ್ಫೋಟಗೊಂಡು ಸಾಮಗ್ರಿಗಳು ಸುಟ್ಟು ಹೋದ ಘಟನೆ ಮಂಗಳವಾರ ನಡೆದಿದೆ.
ಅಯ್ಯಣ್ಣ ಅವರ ಮನೆಯಲ್ಲಿ ಘಟನೆ ನಡೆದಿದೆ. ಗ್ಯಾಸ್ ಲೀಕ್ ಆಗುತ್ತಿದ್ದಂತೆ ಮನೆಯವರೆಲ್ಲ ಹೊರಗೆ ಓಡಿ ಬಂದಿದ್ದರಿಂದ ಕೂದಲೆಳೆ ಅಂತರದಲ್ಲಿ ಜೀವಹಾನಿ ತಪ್ಪಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಹಾನಿಯ ಮೊತ್ತ ಇನ್ನೂ ಅಂದಾಜಿಸಿಲ್ಲ ಎಂದು ಅಗ್ನಿ ಶಾಮಕ ದಳದ ಇನ್ಸ್ಪೆಕ್ಟರ್ ರವೀಂದ್ರ ಘಾಟಗೆ ತಿಳಿಸಿದ್ದಾರೆ.