<p><strong>ರಾಯಚೂರು:</strong> ನಗರದಿಂದ ಮಂತ್ರಾಲಯ ಮಾರ್ಗದ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕವೊಂದು ಅಪಾಯ ಅಹ್ವಾನಿಸುವಂತಿದೆ.</p>.<p>ಐಬಿ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯು ಸರ್ಕಾರಿ ಅಧಿಕಾರಿಗಳಿಗಾಗಿ ನಿರ್ಮಿಸಿರುವ ಬಡಾವಣೆಯು ಈ ಅಪಾಯಕಾರಿ ವಿದ್ಯುತ್ ಪರಿವರ್ತಕಕ್ಕೆ ಹೊಂದಿಕೊಂಡಿದೆ. ಹೆದ್ದಾರಿಯ ಇನ್ನೊಂದು ಭಾಗದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾ ನಗರವಿದೆ. ಈ ಪಾದಚಾರಿ ಮಾರ್ಗದಲ್ಲಿ ಮಕ್ಕಳು ಸೇರಿದಂತೆ ಸದಾ ಜನನಿಬಿಡ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡುವಾಗ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕ ಉಳಿದುಕೊಂಡಿದೆ. ಕಳೆದ ಫೆಬ್ರುವರಿಯಲ್ಲಿ ರಸ್ತೆ ಉದ್ಘಾಟನೆ ಮಾಡಲಾಗಿದ್ದರೂ ಈ ಅಪಾಯಕಾರಿ ಪರಿವರ್ತಕ ಸ್ಥಳಾಂತರಿಸುವ ಕೆಲಸ ಮಾತ್ರ ಹಾಗೇ ಉಳಿದುಕೊಂಡಿದೆ.</p>.<p>ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿ ವಿದ್ಯುತ್ ಪರಿವರ್ತಕವಿದ್ದು, ದೊಡ್ಡವರು ಅಥವಾ ಮಕ್ಕಳು ಸ್ವಲ್ಪ ಮೈಮರೆತು ಅದರ ಪಕ್ಕದಲ್ಲಿ ನಡೆದುಕೊಂಡು ಹೋದರೆ; ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಅಪಾಯವು ಇನ್ನೂ ಹೆಚ್ಚಿಗಿರುತ್ತದೆ.</p>.<p>ಹೆದ್ದಾರಿ ಪಕ್ಕ ರಾಮಲಿಂಗೇಶ್ವರ ದೇವಸ್ಥಾನ ಮೈದಾನದ ಒಂದು ಮೂಲೆಯಲ್ಲಿ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡಿಕೊಡುತ್ತೇವೆ. ಇದಕ್ಕಾಗಿ ನಗರಸಭೆಯಿಂದ ಅನುಮತಿ ಪಡೆಯಲಾಗುವುದು ಎಂದು ಜೆಸ್ಕಾಂ ಅಧಿಕಾರಿಗಳು ಭರವಸೆ ನೀಡಿ ಅನೇಕ ತಿಂಗಳುಗಳಾಗಿದೆ. ಅಪಾಯ ತಪ್ಪಿಸಲು ಕನಿಷ್ಠ ವಿದ್ಯುತ್ ಪರಿವರ್ತಕಕ್ಕೆ ಸುರಕ್ಷತಾ ಬೇಲಿ ಅಳವಡಿಸುತ್ತಿಲ್ಲ.</p>.<p>'ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ ಬಳಿ ಮಕ್ಕಳು ಹಾಗೂ ದೊಡ್ಡವರು ತಿರುಗಾಡುತ್ತಾರೆ. ಆಕಸ್ಮಿಕವಾಗಿ ಕೈ ಸ್ಪರ್ಶವಾದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿದೆ. ಯಾರಾದರೂ ಜೀವ ಕಳೆದುಕೊಳ್ಳುವ ತನಕ ಕಾಯಬಾರದು.</p>.<p>ತುರ್ತಾಗಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ, ಅಪಾಯ ತಪ್ಪಿಸಬೇಕು. ಈ ಬಗ್ಗೆ ದೂರು ಬರೆದು ಐಬಿ ಕಾಲೋನಿಯಲ್ಲಿರುವ ನ್ಯಾಯಾಧೀಶರೊಬ್ಬರ ಸಹಿ ಹಾಕಿಸಿ, ಜೆಸ್ಕಾಂ ಕಚೇರಿಗೆ ಕೊಟ್ಟಿದ್ದೇವೆ. ಆದರೂ ಜೆಸ್ಕಾಂ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ' ಎಂದು ವಿದ್ಯುತ್ ಪರಿವರ್ತಕದ ಬಳಿ ಪಂಕ್ಚರ್ ಶಾಪ್ ಇಟ್ಟಿರುವ ಖಾಜಾ ಮೊಯಿನುದ್ದೀನ್ ಆರೋಪಿಸಿದರು.</p>.<p>ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುವಂತೆ ಜೆಸ್ಕಾಂ ಕಚೇರಿಗೆ ಮನವಿ ಕೊಡುವಾಗ ಸಕಾರಾತ್ಮಕವಾಗಿ ಮಾತನಾಡಿದ್ದರು. ಅನೇಕ ತಿಂಗಳಾದರೂ ಕೆಲಸ ಮಾಡಿಸಿಲ್ಲ.<br /><strong>- ಖಾಜಾ ಮೊಯಿನುದ್ದೀನ್,ಪಂಕ್ಚರ್ ಶಾಪ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ನಗರದಿಂದ ಮಂತ್ರಾಲಯ ಮಾರ್ಗದ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕವೊಂದು ಅಪಾಯ ಅಹ್ವಾನಿಸುವಂತಿದೆ.</p>.<p>ಐಬಿ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯು ಸರ್ಕಾರಿ ಅಧಿಕಾರಿಗಳಿಗಾಗಿ ನಿರ್ಮಿಸಿರುವ ಬಡಾವಣೆಯು ಈ ಅಪಾಯಕಾರಿ ವಿದ್ಯುತ್ ಪರಿವರ್ತಕಕ್ಕೆ ಹೊಂದಿಕೊಂಡಿದೆ. ಹೆದ್ದಾರಿಯ ಇನ್ನೊಂದು ಭಾಗದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾ ನಗರವಿದೆ. ಈ ಪಾದಚಾರಿ ಮಾರ್ಗದಲ್ಲಿ ಮಕ್ಕಳು ಸೇರಿದಂತೆ ಸದಾ ಜನನಿಬಿಡ ಇರುತ್ತದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡುವಾಗ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಪರಿವರ್ತಕ ಉಳಿದುಕೊಂಡಿದೆ. ಕಳೆದ ಫೆಬ್ರುವರಿಯಲ್ಲಿ ರಸ್ತೆ ಉದ್ಘಾಟನೆ ಮಾಡಲಾಗಿದ್ದರೂ ಈ ಅಪಾಯಕಾರಿ ಪರಿವರ್ತಕ ಸ್ಥಳಾಂತರಿಸುವ ಕೆಲಸ ಮಾತ್ರ ಹಾಗೇ ಉಳಿದುಕೊಂಡಿದೆ.</p>.<p>ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿ ವಿದ್ಯುತ್ ಪರಿವರ್ತಕವಿದ್ದು, ದೊಡ್ಡವರು ಅಥವಾ ಮಕ್ಕಳು ಸ್ವಲ್ಪ ಮೈಮರೆತು ಅದರ ಪಕ್ಕದಲ್ಲಿ ನಡೆದುಕೊಂಡು ಹೋದರೆ; ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಅಪಾಯವು ಇನ್ನೂ ಹೆಚ್ಚಿಗಿರುತ್ತದೆ.</p>.<p>ಹೆದ್ದಾರಿ ಪಕ್ಕ ರಾಮಲಿಂಗೇಶ್ವರ ದೇವಸ್ಥಾನ ಮೈದಾನದ ಒಂದು ಮೂಲೆಯಲ್ಲಿ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡಿಕೊಡುತ್ತೇವೆ. ಇದಕ್ಕಾಗಿ ನಗರಸಭೆಯಿಂದ ಅನುಮತಿ ಪಡೆಯಲಾಗುವುದು ಎಂದು ಜೆಸ್ಕಾಂ ಅಧಿಕಾರಿಗಳು ಭರವಸೆ ನೀಡಿ ಅನೇಕ ತಿಂಗಳುಗಳಾಗಿದೆ. ಅಪಾಯ ತಪ್ಪಿಸಲು ಕನಿಷ್ಠ ವಿದ್ಯುತ್ ಪರಿವರ್ತಕಕ್ಕೆ ಸುರಕ್ಷತಾ ಬೇಲಿ ಅಳವಡಿಸುತ್ತಿಲ್ಲ.</p>.<p>'ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕ ಬಳಿ ಮಕ್ಕಳು ಹಾಗೂ ದೊಡ್ಡವರು ತಿರುಗಾಡುತ್ತಾರೆ. ಆಕಸ್ಮಿಕವಾಗಿ ಕೈ ಸ್ಪರ್ಶವಾದರೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿದೆ. ಯಾರಾದರೂ ಜೀವ ಕಳೆದುಕೊಳ್ಳುವ ತನಕ ಕಾಯಬಾರದು.</p>.<p>ತುರ್ತಾಗಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ, ಅಪಾಯ ತಪ್ಪಿಸಬೇಕು. ಈ ಬಗ್ಗೆ ದೂರು ಬರೆದು ಐಬಿ ಕಾಲೋನಿಯಲ್ಲಿರುವ ನ್ಯಾಯಾಧೀಶರೊಬ್ಬರ ಸಹಿ ಹಾಕಿಸಿ, ಜೆಸ್ಕಾಂ ಕಚೇರಿಗೆ ಕೊಟ್ಟಿದ್ದೇವೆ. ಆದರೂ ಜೆಸ್ಕಾಂ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ' ಎಂದು ವಿದ್ಯುತ್ ಪರಿವರ್ತಕದ ಬಳಿ ಪಂಕ್ಚರ್ ಶಾಪ್ ಇಟ್ಟಿರುವ ಖಾಜಾ ಮೊಯಿನುದ್ದೀನ್ ಆರೋಪಿಸಿದರು.</p>.<p>ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುವಂತೆ ಜೆಸ್ಕಾಂ ಕಚೇರಿಗೆ ಮನವಿ ಕೊಡುವಾಗ ಸಕಾರಾತ್ಮಕವಾಗಿ ಮಾತನಾಡಿದ್ದರು. ಅನೇಕ ತಿಂಗಳಾದರೂ ಕೆಲಸ ಮಾಡಿಸಿಲ್ಲ.<br /><strong>- ಖಾಜಾ ಮೊಯಿನುದ್ದೀನ್,ಪಂಕ್ಚರ್ ಶಾಪ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>