ತುರ್ತಾಗಿ ವಿದ್ಯುತ್ ಪರಿವರ್ತಕ ಸ್ಥಳಾಂತರಿಸಿ, ಅಪಾಯ ತಪ್ಪಿಸಬೇಕು. ಈ ಬಗ್ಗೆ ದೂರು ಬರೆದು ಐಬಿ ಕಾಲೋನಿಯಲ್ಲಿರುವ ನ್ಯಾಯಾಧೀಶರೊಬ್ಬರ ಸಹಿ ಹಾಕಿಸಿ, ಜೆಸ್ಕಾಂ ಕಚೇರಿಗೆ ಕೊಟ್ಟಿದ್ದೇವೆ. ಆದರೂ ಜೆಸ್ಕಾಂ ಅಧಿಕಾರಿಗಳು ಕಣ್ಣು ತೆರೆಯುತ್ತಿಲ್ಲ' ಎಂದು ವಿದ್ಯುತ್ ಪರಿವರ್ತಕದ ಬಳಿ ಪಂಕ್ಚರ್ ಶಾಪ್ ಇಟ್ಟಿರುವ ಖಾಜಾ ಮೊಯಿನುದ್ದೀನ್ ಆರೋಪಿಸಿದರು.