ಶನಿರಾತ್ರಿ ರಾತ್ರಿಯಿಡೀ ಸುರಿದಿದ್ದ ಮಳೆಯಿಂದ ಆಂಧ್ರಪ್ರದೇಶದ ಎಮ್ಮಿಗನೂರು ಹಳ್ಳ ಒಡೆದು ಮಾರ್ಗ ಬದಲಾಯಿಸಿ ಮಂತ್ರಾಲಯ ಗ್ರಾಮಕ್ಕೆ ನುಗ್ಗಿತ್ತು. ಇದರಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕೆಲವು ಮಾರ್ಗಗಳಲ್ಲಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಭಕ್ತರ ವಾಹನಗಳು ಜಲಾವೃತವಾಗಿದ್ದವು. ಮಳಿಗೆಗಳಿಗೂ ನೀರು ನುಗ್ಗಿತ್ತು. ಆದರೆ ಮಠದ ಆವರಣ ಜಲಾವೃತ ಆಗಿರಲಿಲ್ಲ.