<p><strong>ಮಸ್ಕಿ</strong>: ಕೋವಿಡ್ನಿಂದ ಎರಡು ವರ್ಷದಿಂದ ಮಹತ್ವ ಕಳೆದುಕೊಂಡಿದ್ದ ಬೆಳಕಿನ ಹಬ್ಬ ದೀಪಾವಳಿ ಕೋವಿಡ್ ನಿಯಮ ಸಡಿಲಿಕೆ ಹಾಗೂ ಬೆಲೆ ಏರಿಕೆಯ ನಡುವೆಯೂ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ಪಟ್ಟಣದಲ್ಲಿ ಸಕಲ ಸಿದ್ಧತೆಗಳು ನಡೆಯತೊಡಗಿವೆ.</p>.<p>ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದಂದು ತಮ್ಮ ತಮ್ಮ ವ್ಯವಹಾರದ ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಮಾಡುವ ಮೂಲಕ ದೀಪಾವಳಿ ಆಚರಿಸಲು ವ್ಯಾಪಾರಸ್ಥರು ಹಾಗೂ ವಾಣಿಜ್ಯೋದ್ಯಮಿಗಳು ತಯಾರಿ ನಡೆಸಿದ್ದಾರೆ.</p>.<p>ಅಂಗಡಿಗಳಿಗೆ ಸುಣ್ಣ ಬಣ್ಣ ಬಳಿದು, ತಳೀರು ತೋರಣ ಕಟ್ಟುವ ಮೂಲಕ ಮಹಾಲಕ್ಷ್ಮಿ ದೇವಿ ಪೂಜೆಗೆ ಸಿದ್ಧತೆ ನಡೆಸಿದ್ದಾರೆ.</p>.<p>ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಈಗಾಗಲೇ ಬಗೆ ಬಗೆ ಹೂವು– ಹಣ್ಣುಗಳು, ಬಾಳೆ ದಿಂಡು ಸೇರಿದಂತೆ ಅನೇಕ<br />ಪೂಜಾ ಸಾಮಾಗ್ರಿಗಳ ಮಾರಾಟ ಜೋರಾಗಿದೆ.</p>.<p>ಹಳೆ ಬಸ್ ನಿಲ್ದಾಣದಲ್ಲಿ ಹಣ್ಣು ಹಾಗೂ ಹೂವಿನ ಮಾರುಕಟ್ಟೆ ಅಂಗಡಿಗಳು ಅಲಂಕಾರ ಮಾಡಿಕೊಂಡು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಿದ್ಧಗೊಂಡಿವೆ.</p>.<p>ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಕನಕಾಂಬರಿ ಹೂವು ಸೇರಿದಂತೆ ವಿವಿಧ ತಳಿಯ ಹೂವುಗಳು ಮಾರಾಟದ ಅಂಗಡಿಯಲ್ಲಿ ಕಂಡು ಬರುತ್ತಿವೆ. ಪ್ರತಿ ಕೆಜಿ ಚೆಂಡು ಹೂವಿಗೆ ₹ 80 ರಿಂದ ₹ 100 ಕ್ಕೆ ಮಾರಾಟ ಮಾಡಲಾಗುತ್ತಿದೆ.</p>.<p>ಅಲಂಕಾರಕ್ಕಾಗಿ ಬಾಳೆ ದಿಂಡು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರೆ, ಅಂಗಡಿ ಹಾಗೂ ವಾಹನಗಳ ಮುಂದೆ ಹೊಡೆಯಲು ಕರಿ ಕುಂಬಳಕಾಯಿ ಮಾರಾಟ ಭರ್ಜರಿಯಾಗಿ ನಡೆದಿದೆ. ಒಂದು ಕುಂಬಳಕಾಯಿ ಬೆಲೆ ₹ 100 ರಿಂದ ₹ 150 ರವರೆಗೆ ಮಾರಾಟ ಮಾಡುತ್ತಿದೆ.</p>.<p>ಬಾಳೆ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳು ಕೂಡಾ ಮಾರುಕಟ್ಟೆಗೆ ಪ್ರವೇಶ ಮಾಡಿವೆ.</p>.<p>ಎರಡು ವರ್ಷಗಳ ಕೋವಿಡ್ನಿಂದ ಲಾಕ್ ಆಗಿದ್ದ ದೀಪಾವಳಿ ಈ ಸಾರಿ ಸಡಗರ ಸಂಭ್ರಮದಿಂದ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.</p>.<p>‘ಕೊರೊನಾ ನಿಯಮ ಸಡಿಲಿಕೆಯಿಂದಾಗಿ ಈ ಸಾರಿ ದೀಪಾವಳಿ ದಿನದಂದು ಲಕ್ಷ್ಮೀ ಪೂಜೆ ಸಡಗರದಿಂದ ನಡೆಯಲಿದೆ ಎಂಬ ವಿಶ್ವಾಸ ಇದೆ. ಇದರಿಂದ ನಮ್ಮ ವ್ಯಾಪಾರ ಕೂಡಾ ಚೆನ್ನಾಗಿ ಆಗಬಹುದು‘ ಎಂದು ಹಣ್ಣಿನ ವ್ಯಾಪಾರಿ ರವಿಕುಮಾರ ಹೇಳುತ್ತಾರೆ.</p>.<p class="Briefhead"><strong>ಜೂಜಾಟ ನಿಷೇಧ</strong></p>.<p><strong>ಮಸ್ಕಿ</strong>: ದೀಪಾವಳಿ ಆಚರಣೆ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಜೂಜಾಟವನ್ನು ನಿಷೇಧಿಸಲಾಗಿದೆ ಎಂದು ಸಿಪಿಐ ಸಂಜೀವ್ ಬಳಿಗಾರ ತಿಳಿಸಿದ್ದಾರೆ.</p>.<p>ಅಂಗಡಿ, ಹೊಟೇಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಕಂಡು ಬಂದರೆ ಅಂತವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.</p>.<p>ಈಗಾಗಲೇ ತಾಲ್ಲೂಕಿನಾದ್ಯಂತ ಜೂಜಾಟ ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಡಂಗೂರ ಬಾರಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.</p>.<p>ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ</strong>: ಕೋವಿಡ್ನಿಂದ ಎರಡು ವರ್ಷದಿಂದ ಮಹತ್ವ ಕಳೆದುಕೊಂಡಿದ್ದ ಬೆಳಕಿನ ಹಬ್ಬ ದೀಪಾವಳಿ ಕೋವಿಡ್ ನಿಯಮ ಸಡಿಲಿಕೆ ಹಾಗೂ ಬೆಲೆ ಏರಿಕೆಯ ನಡುವೆಯೂ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ಪಟ್ಟಣದಲ್ಲಿ ಸಕಲ ಸಿದ್ಧತೆಗಳು ನಡೆಯತೊಡಗಿವೆ.</p>.<p>ದೀಪಾವಳಿ ಅಮಾವಾಸ್ಯೆ ಹಾಗೂ ಪಾಡ್ಯದಂದು ತಮ್ಮ ತಮ್ಮ ವ್ಯವಹಾರದ ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಮಾಡುವ ಮೂಲಕ ದೀಪಾವಳಿ ಆಚರಿಸಲು ವ್ಯಾಪಾರಸ್ಥರು ಹಾಗೂ ವಾಣಿಜ್ಯೋದ್ಯಮಿಗಳು ತಯಾರಿ ನಡೆಸಿದ್ದಾರೆ.</p>.<p>ಅಂಗಡಿಗಳಿಗೆ ಸುಣ್ಣ ಬಣ್ಣ ಬಳಿದು, ತಳೀರು ತೋರಣ ಕಟ್ಟುವ ಮೂಲಕ ಮಹಾಲಕ್ಷ್ಮಿ ದೇವಿ ಪೂಜೆಗೆ ಸಿದ್ಧತೆ ನಡೆಸಿದ್ದಾರೆ.</p>.<p>ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಈಗಾಗಲೇ ಬಗೆ ಬಗೆ ಹೂವು– ಹಣ್ಣುಗಳು, ಬಾಳೆ ದಿಂಡು ಸೇರಿದಂತೆ ಅನೇಕ<br />ಪೂಜಾ ಸಾಮಾಗ್ರಿಗಳ ಮಾರಾಟ ಜೋರಾಗಿದೆ.</p>.<p>ಹಳೆ ಬಸ್ ನಿಲ್ದಾಣದಲ್ಲಿ ಹಣ್ಣು ಹಾಗೂ ಹೂವಿನ ಮಾರುಕಟ್ಟೆ ಅಂಗಡಿಗಳು ಅಲಂಕಾರ ಮಾಡಿಕೊಂಡು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಿದ್ಧಗೊಂಡಿವೆ.</p>.<p>ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ, ಕನಕಾಂಬರಿ ಹೂವು ಸೇರಿದಂತೆ ವಿವಿಧ ತಳಿಯ ಹೂವುಗಳು ಮಾರಾಟದ ಅಂಗಡಿಯಲ್ಲಿ ಕಂಡು ಬರುತ್ತಿವೆ. ಪ್ರತಿ ಕೆಜಿ ಚೆಂಡು ಹೂವಿಗೆ ₹ 80 ರಿಂದ ₹ 100 ಕ್ಕೆ ಮಾರಾಟ ಮಾಡಲಾಗುತ್ತಿದೆ.</p>.<p>ಅಲಂಕಾರಕ್ಕಾಗಿ ಬಾಳೆ ದಿಂಡು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರೆ, ಅಂಗಡಿ ಹಾಗೂ ವಾಹನಗಳ ಮುಂದೆ ಹೊಡೆಯಲು ಕರಿ ಕುಂಬಳಕಾಯಿ ಮಾರಾಟ ಭರ್ಜರಿಯಾಗಿ ನಡೆದಿದೆ. ಒಂದು ಕುಂಬಳಕಾಯಿ ಬೆಲೆ ₹ 100 ರಿಂದ ₹ 150 ರವರೆಗೆ ಮಾರಾಟ ಮಾಡುತ್ತಿದೆ.</p>.<p>ಬಾಳೆ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳು ಕೂಡಾ ಮಾರುಕಟ್ಟೆಗೆ ಪ್ರವೇಶ ಮಾಡಿವೆ.</p>.<p>ಎರಡು ವರ್ಷಗಳ ಕೋವಿಡ್ನಿಂದ ಲಾಕ್ ಆಗಿದ್ದ ದೀಪಾವಳಿ ಈ ಸಾರಿ ಸಡಗರ ಸಂಭ್ರಮದಿಂದ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.</p>.<p>‘ಕೊರೊನಾ ನಿಯಮ ಸಡಿಲಿಕೆಯಿಂದಾಗಿ ಈ ಸಾರಿ ದೀಪಾವಳಿ ದಿನದಂದು ಲಕ್ಷ್ಮೀ ಪೂಜೆ ಸಡಗರದಿಂದ ನಡೆಯಲಿದೆ ಎಂಬ ವಿಶ್ವಾಸ ಇದೆ. ಇದರಿಂದ ನಮ್ಮ ವ್ಯಾಪಾರ ಕೂಡಾ ಚೆನ್ನಾಗಿ ಆಗಬಹುದು‘ ಎಂದು ಹಣ್ಣಿನ ವ್ಯಾಪಾರಿ ರವಿಕುಮಾರ ಹೇಳುತ್ತಾರೆ.</p>.<p class="Briefhead"><strong>ಜೂಜಾಟ ನಿಷೇಧ</strong></p>.<p><strong>ಮಸ್ಕಿ</strong>: ದೀಪಾವಳಿ ಆಚರಣೆ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಜೂಜಾಟವನ್ನು ನಿಷೇಧಿಸಲಾಗಿದೆ ಎಂದು ಸಿಪಿಐ ಸಂಜೀವ್ ಬಳಿಗಾರ ತಿಳಿಸಿದ್ದಾರೆ.</p>.<p>ಅಂಗಡಿ, ಹೊಟೇಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಕಂಡು ಬಂದರೆ ಅಂತವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.</p>.<p>ಈಗಾಗಲೇ ತಾಲ್ಲೂಕಿನಾದ್ಯಂತ ಜೂಜಾಟ ನಿಷೇಧಿಸಿರುವ ಬಗ್ಗೆ ಸಾರ್ವಜನಿಕರಿಗೆ ಡಂಗೂರ ಬಾರಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.</p>.<p>ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>