<p><strong>ರಾಯಚೂರು: </strong>ರಾಯಚೂರಿನ ಹಿರಿಯ ಚಿತ್ರಕಲಾವಿದ ಎಚ್.ಎಚ್.ಮ್ಯಾದಾರ ಅವರ ಚಿತ್ರಗಳು ಅದರಲ್ಲಿ ವಿಶೇಷವಾಗಿ ಚುಕ್ಕೆ ಚಿತ್ರಗಳು ಅಪರೂಪದ ಕಲಾಕೃತಿಗಳಾಗಿವೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿತ್ರಕಲಾವಿದ ಪ್ರೊ.ಅಂದಾನಿ ವಿ.ಜಿ ಹೇಳಿದರು.</p>.<p>ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ’ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು.</p>.<p>ನಾಡಿನ ಹಿಂದಿನ ಚುಕ್ಕೆ ಚಿತ್ರಕಲಾವಿದ ವಿ.ಎಸ್.ಬುರಾಣಪೂರ ಅವರ ಕಲಾಕೃತಿಗಳಿಂದ ಪ್ರೇರಿತರಾದ ಮ್ಯಾದಾರ್ ಅವರು ಉತ್ತಮ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ ಎಂದು ವರ್ಣಿಸಿದರು.<br /><br />ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ ಮಾತನಾಡಿ, ಮ್ಯಾದಾರ್ ಅವರು ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲ, ಬದಲಾಗಿ ಕಲಾಕೃತಿಗಳನ್ನು ಸಂಗ್ರಹಿಸಿ ಗ್ಯಾಲರಿ ನಿರ್ಮಿಸಿ ಸದಾಕಾಲ ಎಲ್ಲರೂ ವೀಕ್ಷಿಸಿ ಸಂತೋಷಪಡುವಂತಾಗಲಿ ಎಂದು ಆಶಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉದಯೋನ್ಮುಖ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕಲಾವಿದರಿಗೆ ವೇದಿಕೆ ಒದಗಿಸಿರುವುದು ಸೂಕ್ತವಾಗಿದೆ. ಎಂದೆಂದಿಗೂ ಚಿತ್ರಕಲಾ ಪರಿಷತ್ತಿಗೆ ಸಹಾಯ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.</p>.<p>ಪ್ರೊ ಎಂ.ಜೆ.ಕಮಲಾಕ್ಷಿ ಮಾಜಿ ಅಧ್ಯಕ್ಷರು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಬೆಂಗಳೂರು ಅವರು ಮಾತನಾಡಿ, ಮ್ಯಾದಾರ್ ಅವರು ನಾಡಿನ ಪರಂಪರೆ, ಇತಿಹಾಸ, ಆದರ್ಶ ವ್ಯಕ್ತಿಗಳನ್ನು ನೆನಪಿಸುವಂತಹ ಅದರಲ್ಲೂ ವಿರಳವಾಗಿ ರಚಿಸಲಾಗುವ ಚುಕ್ಕಿ ಚಿತ್ರಗಳು ಅತ್ಯಂತ ಗುಣಮಟ್ಟದಲ್ಲಿ ಆಕರ್ಷಕವಾಗಿ ರಚನೆಗೊಂಡಿವೆ ಎಂದರು.</p>.<p>ಎಚ್.ಪಂಪಯ್ಯ ಶೆಟ್ಟಿ, ಮಲ್ಲಣ್ಣಗೌಡ ಇಂದುಪೂರ, ಎಂ.ಕೃಷ್ಣ , ಬಾಬು ಜಟ್ಕರ್, ಬಿ.ವಿ.ಚಂದ್ರಶೇಖರ, ರೇಣುಕಾದೇವಿ, ರಾಜ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ರಾಯಚೂರಿನ ಹಿರಿಯ ಚಿತ್ರಕಲಾವಿದ ಎಚ್.ಎಚ್.ಮ್ಯಾದಾರ ಅವರ ಚಿತ್ರಗಳು ಅದರಲ್ಲಿ ವಿಶೇಷವಾಗಿ ಚುಕ್ಕೆ ಚಿತ್ರಗಳು ಅಪರೂಪದ ಕಲಾಕೃತಿಗಳಾಗಿವೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿತ್ರಕಲಾವಿದ ಪ್ರೊ.ಅಂದಾನಿ ವಿ.ಜಿ ಹೇಳಿದರು.</p>.<p>ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ’ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು.</p>.<p>ನಾಡಿನ ಹಿಂದಿನ ಚುಕ್ಕೆ ಚಿತ್ರಕಲಾವಿದ ವಿ.ಎಸ್.ಬುರಾಣಪೂರ ಅವರ ಕಲಾಕೃತಿಗಳಿಂದ ಪ್ರೇರಿತರಾದ ಮ್ಯಾದಾರ್ ಅವರು ಉತ್ತಮ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ ಎಂದು ವರ್ಣಿಸಿದರು.<br /><br />ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ ಮಾತನಾಡಿ, ಮ್ಯಾದಾರ್ ಅವರು ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲ, ಬದಲಾಗಿ ಕಲಾಕೃತಿಗಳನ್ನು ಸಂಗ್ರಹಿಸಿ ಗ್ಯಾಲರಿ ನಿರ್ಮಿಸಿ ಸದಾಕಾಲ ಎಲ್ಲರೂ ವೀಕ್ಷಿಸಿ ಸಂತೋಷಪಡುವಂತಾಗಲಿ ಎಂದು ಆಶಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉದಯೋನ್ಮುಖ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕಲಾವಿದರಿಗೆ ವೇದಿಕೆ ಒದಗಿಸಿರುವುದು ಸೂಕ್ತವಾಗಿದೆ. ಎಂದೆಂದಿಗೂ ಚಿತ್ರಕಲಾ ಪರಿಷತ್ತಿಗೆ ಸಹಾಯ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.</p>.<p>ಪ್ರೊ ಎಂ.ಜೆ.ಕಮಲಾಕ್ಷಿ ಮಾಜಿ ಅಧ್ಯಕ್ಷರು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಬೆಂಗಳೂರು ಅವರು ಮಾತನಾಡಿ, ಮ್ಯಾದಾರ್ ಅವರು ನಾಡಿನ ಪರಂಪರೆ, ಇತಿಹಾಸ, ಆದರ್ಶ ವ್ಯಕ್ತಿಗಳನ್ನು ನೆನಪಿಸುವಂತಹ ಅದರಲ್ಲೂ ವಿರಳವಾಗಿ ರಚಿಸಲಾಗುವ ಚುಕ್ಕಿ ಚಿತ್ರಗಳು ಅತ್ಯಂತ ಗುಣಮಟ್ಟದಲ್ಲಿ ಆಕರ್ಷಕವಾಗಿ ರಚನೆಗೊಂಡಿವೆ ಎಂದರು.</p>.<p>ಎಚ್.ಪಂಪಯ್ಯ ಶೆಟ್ಟಿ, ಮಲ್ಲಣ್ಣಗೌಡ ಇಂದುಪೂರ, ಎಂ.ಕೃಷ್ಣ , ಬಾಬು ಜಟ್ಕರ್, ಬಿ.ವಿ.ಚಂದ್ರಶೇಖರ, ರೇಣುಕಾದೇವಿ, ರಾಜ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>