ಬಂಡೆಬಾವಿ ಗ್ರಾಮದ ರೈತ ರಮೇಶ ಗುಡ್ಡಕಾಯೋರು ಅವರು ಬಿಳಿಜೋಳದ ಒಣ ಸೊಪ್ಪು ತುಂಬಿಕೊಂಡು ಗೌಡೂರು ಕಡೆಯಿಂದ ಬಂಡೇಬಾವಿಗೆ ತರುತ್ತಿದ್ದರು. ಮಾರ್ಗದ ಮಧ್ಯ ಗೌಡೂರು ತಾಂಡಾದ ರಸ್ತೆಯಲ್ಲಿ ಸೊಪ್ಪಿನ ರಾಶಿಗೆ ವಿದ್ಯುತ್ ತಂತಿಗಳು ತಗುಲಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಂಜಿನ್ ಪ್ರತ್ಯೇಕಗೊಳಿಸಲಾಗಿದೆ.