ರಾಯಚೂರು: ಮಾಜಿ ಸಚಿವ ಸುಧೀಂದ್ರರಾವ್ ಕಸ್ಬೆ (83) ಅವರು ಸ್ವಗ್ರಾಮ ತಾಲ್ಲೂಕಿನ ಗಿಲ್ಲೇಸುಗೂರಿನಲ್ಲಿ ಭಾನುವಾರ ನಿಧನರಾದರು.ಅವರಿಗೆ ಇಬ್ಬರು ಪತ್ನಿಯರು, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.
1978ರಲ್ಲಿ ಕಲ್ಮಲಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಮುಜರಾಯಿ, ಕೃಷಿ ಖಾತೆ ಸಚಿವರಾಗಿದ್ದರು. 1983 ರಲ್ಲಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು.
ಭಾನುವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.