ಈ ಬಾರಿಯ ಬಿರು ಬೇಸಿಗೆಯಿಂದ ಎಲ್ಲೆಡೆ ಭೀಕರ ಕ್ಷಾಮ ಆವರಿಸಿದ್ದು ಜನ ಕಂಗಾಲಾಗಿದ್ದಾರೆ. ಇನ್ನೂ ಕೆರೆಕಟ್ಟೆಗಳಲ್ಲಿ ನೀರು ಖಾಲಿಯಾಗುತ್ತಿದ್ದು ಜಲಚರಣಗಳ ಮಾರಣ ಹೋಮ ನಡೆಯುತ್ತಿದೆ. ಮೀನುಗಾರರಿಗೆ ಸರಿಯಾಗಿ ಮೀನುಗಳೇ ಸಿಗದಾಗಿದ್ದು ಕೆಸರಿನ ಮಡುವಿನಲ್ಲಿ ಬಿದ್ದಿರುವ ಮೀನುಗಳನ್ನು ಹಿಡಿಯುತ್ತಿದ್ದಾರೆ. ಸತ್ತಿರುವ ಮೀನುಗಳನ್ನು ತಿನ್ನಲು, ನಾಯಿ, ಪಕ್ಷಿಗಳು ಕೆರೆ ಹತ್ತಿರ ಬರುತ್ತಿವೆ.