ರಾಯಚೂರು: ಕೃಷ್ಣಾನದಿಗೆ ನಾರಾಯಣಪುರ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 2.86 ಲಕ್ಷ ಕ್ಯುಸೆಕ್ ಅಡಿ ಬಿಡಲಾಗುತ್ತಿದೆ.
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಹಾಗೂ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿವೆ. ಆದರೆ, ರಾಯಚೂರು ತಾಲ್ಲೂಕಿನ ಗುರ್ಜಾಪುರ ಸೇತುವೆ ಮೇಲಿನ ನೀರು ಕೆಳಗೆ ಸರಿದಿದೆ.
ತುಂಗಾಭದ್ರಾ ನದಿಯಲ್ಲೂ ಪ್ರವಾಹ ಶುರುವಾಗಿದೆ. ಹೊಸಪೇಟೆಯ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ಅಡಿ ನೀರು ಬರುತ್ತಿದೆ.
ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ ನದಿತೀರದಲ್ಲಿ ಮುನ್ನಚ್ಚರಿಕೆ ನೀಡಲಾಗಿದೆ.