<p><strong>ಮುದಗಲ್:</strong> ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದರಿಂದ ವಿದ್ಯಾರ್ಥಿನಿಯರು ವಿವಿಧ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.</p><p>2020ರ ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ₹2 ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಆರಂಭದಲ್ಲಿ ಕಳಕಪ್ಪ ಜೀಡಿ ಎಂಬುವರು ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ನ್ಯಾಯಾಲಯದಿಂದ ತಡೆ ತಂದು 3 ತಿಂಗಳ ಕಾಮಗಾರಿ ನಿಲ್ಲಿಸಿದ್ದರು.</p><p>ಹೊಸ ಕಟ್ಟಡದಲ್ಲಿ 16 ಕೊಠಡಿಗಳು, ಒಂದು ಊಟದ ಹಾಲ್, ಒಂದು ಅಡುಗೆ ತಯಾರಿಸುವ ಕೊಠಡಿ ಇದೆ. ನಾಲ್ಕು ವರ್ಷಗಳಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೊಠಡಿಗಳಿಗೆ ಕಿಟಕಿ ಮುಚ್ಚುವ ಸಾಮಾಗ್ರಿಗಳು ಅಳವಡಿಸಿಲ್ಲ. ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸುಣ್ಣ ಬಣ್ಣ ಕಂಡಿಲ್ಲ.</p><p>ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಆರು ಕೊಠಡಿಗಳಲ್ಲಿ 50 ವಿದ್ಯಾರ್ಥಿಗಳು ಇರಬೇಕಾಗಿದೆ. ಈ ವಿದ್ಯಾರ್ಥಿನಿಯರಿಗೆ ಐದು ಸ್ನಾನ ಗೃಹ, ನಾಲ್ಕು ಶೌಚಾಲಯಗಳಿವೆ. ಇವರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕಾದ ಶೌಚ, ಸ್ನಾನಕ್ಕೆ ನಸುಕಿನ ಜಾವ ಐದು ಗಂಟೆಯಿಂದಲೇ ಪಾಳೆ ಹಚ್ಚಬೇಕಾಗಿದೆ.</p><p>ಆರು ಕೊಠಡಿಯಲ್ಲಿ ಸರ್ಕಾರದಿಂದ ನೇಮಕವಾದ ಐವತ್ತು ವಿದ್ಯಾರ್ಥಿನಿಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಶಫಾರಸಿನ ಮೂಲಕ ಅನಧಿಕೃತವಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿದ್ದು ಕೊಠಡಿಗಳು ಸಾಲುತ್ತಿಲ್ಲ ಎಂದು ವಸತಿ ನಿಲಯದ ವಾರ್ಡನ್ ಹೇಳುತ್ತಿದ್ದರೆ.</p><p>ಬಾಡಿಗೆ ಕಟ್ಟಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವಾಹನಗಳ ಶಬ್ದದಿಂದ ಓದಿಲು ಆಗುತ್ತಿಲ್ಲ. ಓದಲು ಗುಣಮಟ್ಟದ ಪರಿಸರ ಇಲ್ಲ.</p><p>ನೂತನ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಕೊಡಿ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.</p><p>ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಡಿಎಸ್ಎಸ್ ಮುಖಂಡ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ಒತ್ತಾಯಿಸಿದ್ದಾರೆ.</p>.<div><blockquote>ವಸತಿ ನಿಲಯ ಕಟ್ಟಡ ಕಾಮಗಾರಿ ಶೀಘ್ರವೇ ಮುಗಿಸಿ ಕೊಡಿ ಎಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ</blockquote><span class="attribution">ರಮೇಶ ರಾಠೋಡ್, ತಾಲ್ಲೂಕಾಧಿಕಾರಿ, ಹಿಂದುಳಿದ ವರ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್:</strong> ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದರಿಂದ ವಿದ್ಯಾರ್ಥಿನಿಯರು ವಿವಿಧ ಸೌಲಭ್ಯಕ್ಕಾಗಿ ಪರದಾಡುವಂತಾಗಿದೆ.</p><p>2020ರ ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ₹2 ಕೋಟಿ ಅನುದಾನದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಆರಂಭದಲ್ಲಿ ಕಳಕಪ್ಪ ಜೀಡಿ ಎಂಬುವರು ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ನ್ಯಾಯಾಲಯದಿಂದ ತಡೆ ತಂದು 3 ತಿಂಗಳ ಕಾಮಗಾರಿ ನಿಲ್ಲಿಸಿದ್ದರು.</p><p>ಹೊಸ ಕಟ್ಟಡದಲ್ಲಿ 16 ಕೊಠಡಿಗಳು, ಒಂದು ಊಟದ ಹಾಲ್, ಒಂದು ಅಡುಗೆ ತಯಾರಿಸುವ ಕೊಠಡಿ ಇದೆ. ನಾಲ್ಕು ವರ್ಷಗಳಿಂದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೊಠಡಿಗಳಿಗೆ ಕಿಟಕಿ ಮುಚ್ಚುವ ಸಾಮಾಗ್ರಿಗಳು ಅಳವಡಿಸಿಲ್ಲ. ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸುಣ್ಣ ಬಣ್ಣ ಕಂಡಿಲ್ಲ.</p><p>ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಆರು ಕೊಠಡಿಗಳಲ್ಲಿ 50 ವಿದ್ಯಾರ್ಥಿಗಳು ಇರಬೇಕಾಗಿದೆ. ಈ ವಿದ್ಯಾರ್ಥಿನಿಯರಿಗೆ ಐದು ಸ್ನಾನ ಗೃಹ, ನಾಲ್ಕು ಶೌಚಾಲಯಗಳಿವೆ. ಇವರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕಾದ ಶೌಚ, ಸ್ನಾನಕ್ಕೆ ನಸುಕಿನ ಜಾವ ಐದು ಗಂಟೆಯಿಂದಲೇ ಪಾಳೆ ಹಚ್ಚಬೇಕಾಗಿದೆ.</p><p>ಆರು ಕೊಠಡಿಯಲ್ಲಿ ಸರ್ಕಾರದಿಂದ ನೇಮಕವಾದ ಐವತ್ತು ವಿದ್ಯಾರ್ಥಿನಿಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಶಫಾರಸಿನ ಮೂಲಕ ಅನಧಿಕೃತವಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿದ್ದು ಕೊಠಡಿಗಳು ಸಾಲುತ್ತಿಲ್ಲ ಎಂದು ವಸತಿ ನಿಲಯದ ವಾರ್ಡನ್ ಹೇಳುತ್ತಿದ್ದರೆ.</p><p>ಬಾಡಿಗೆ ಕಟ್ಟಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವಾಹನಗಳ ಶಬ್ದದಿಂದ ಓದಿಲು ಆಗುತ್ತಿಲ್ಲ. ಓದಲು ಗುಣಮಟ್ಟದ ಪರಿಸರ ಇಲ್ಲ.</p><p>ನೂತನ ಕಟ್ಟಡ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಉದ್ಘಾಟನೆ ಮಾಡಿ ಕೊಡಿ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.</p><p>ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಡಿಎಸ್ಎಸ್ ಮುಖಂಡ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ಒತ್ತಾಯಿಸಿದ್ದಾರೆ.</p>.<div><blockquote>ವಸತಿ ನಿಲಯ ಕಟ್ಟಡ ಕಾಮಗಾರಿ ಶೀಘ್ರವೇ ಮುಗಿಸಿ ಕೊಡಿ ಎಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದೇವೆ</blockquote><span class="attribution">ರಮೇಶ ರಾಠೋಡ್, ತಾಲ್ಲೂಕಾಧಿಕಾರಿ, ಹಿಂದುಳಿದ ವರ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>