ಮಂಗಳವಾರ ಪಟ್ಟಣದ ಗಡಿಯಾರ ವೃತ್ತದಲ್ಲಿ ಹಿಂದೂ ಮಹಾಸಭಾ ಗಜಾನನ ಸಮಿತಿ, ಪ್ರವಾಸಿ ಮಂದಿರ ಬಳಿ ಕೊಕ್ಕೊ ಬಾಯ್ಸ್, ಬಸ್ ನಿಲ್ದಾಣ ಬಳಿ ಸ್ವಾಮಿ ವಿವೇಕಾನಂದ ಗಜಾನನ ಸಮಿತಿ, ರಾಯಚೂರು ರಸ್ತೆಯಲ್ಲಿ ಲಕ್ಷ್ಮಿ ಗಜಾನನ ಸಮಿತಿ, ಸಂತೆ ಬಜಾರದಲ್ಲಿ ಹಿಂದೂ ಜಾಗರಣಾ ಸಮಿತಿ ಬೃಹದಾಕಾರದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಠಾಣೆ ವ್ಯಾಪ್ತಿ ಪ್ರದೇಶದಲ್ಲಿ 122ಕ್ಕೂ ಹೆಚ್ಚು ಹಾಗೂ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ 28 ಗಣೇಶಮೂರ್ತಿ ಪ್ರತಿಷ್ಠಾಪನೆಗೊಂಡಿವೆ.