<p><strong>ಮಾನ್ವಿ:</strong> ‘ಪಟ್ಟಣದ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 56 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಹೇಳಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸಹಕಾರಿ ಸಂಸ್ಥೆ 2020-21ನೇ ಸಾಲಿನಲ್ಲಿ ₹ 53.66 ಕೋಟಿ ವ್ಯವಹಾರ ಮಾಡಿ, ₹ 21.97 ಕೋಟಿ ಸಾಲ ನೀಡಿದೆ. ₹ 65ಲಕ್ಷ ಷೇರು ಬಂಡವಾಳ, ₹ 31.69 ಕೋಟಿ ಠೇವಣಿ, ₹ 33.65 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ತಿಳಿಸಿದರು.</p>.<p>‘ಕೋವಿಡ್ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ 5 ಅಶಾ ಕಾರ್ಯಕರ್ತರಿಗೆ ತಲಾ ₹ 3ಸಾವಿರ ಪ್ರೋತ್ಸಾಹ ಧನ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 25ಸಾವಿರ ದೇಣಿಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಲಿಂಗಸುಗೂರಿನಲ್ಲಿ ಸಂಸ್ಥೆಯ ನೂತನ ಶಾಖೆಯನ್ನು ತೆರೆಯಲಾಗುವುದು’ ಎಂದರು.</p>.<p>ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಇಲ್ಲೂರು, ನಿರ್ದೇಶಕರಾದ ರಾಮಾಂಜನೇಯ ಶೆಟ್ಟಿ, ಬಸವಂತಕುಮಾರ, ಚಂದ್ರಕಾಂತ ಇಲ್ಲೂರು, ಶಂಭುಲಿಂಗಯ್ಯಸ್ವಾಮಿ ಹಿರೇಮಠ, ಬೆನಕಯ್ಯ ಶೆಟ್ಟಿ, ಸತೀಶ ಇಲ್ಲೂರು, ಮೆಹಬೂಬ್ ಖಾನ್, ದತ್ತಾತ್ರೇಯ ಮೇಟಿ, ದೇವರಾಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನ್ವಿ:</strong> ‘ಪಟ್ಟಣದ ಗುರು ರಾಘವೇಂದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 56 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಡಾ.ವೀರಣ್ಣ ಹೇಳಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸಹಕಾರಿ ಸಂಸ್ಥೆ 2020-21ನೇ ಸಾಲಿನಲ್ಲಿ ₹ 53.66 ಕೋಟಿ ವ್ಯವಹಾರ ಮಾಡಿ, ₹ 21.97 ಕೋಟಿ ಸಾಲ ನೀಡಿದೆ. ₹ 65ಲಕ್ಷ ಷೇರು ಬಂಡವಾಳ, ₹ 31.69 ಕೋಟಿ ಠೇವಣಿ, ₹ 33.65 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ತಿಳಿಸಿದರು.</p>.<p>‘ಕೋವಿಡ್ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ 5 ಅಶಾ ಕಾರ್ಯಕರ್ತರಿಗೆ ತಲಾ ₹ 3ಸಾವಿರ ಪ್ರೋತ್ಸಾಹ ಧನ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 25ಸಾವಿರ ದೇಣಿಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಲಿಂಗಸುಗೂರಿನಲ್ಲಿ ಸಂಸ್ಥೆಯ ನೂತನ ಶಾಖೆಯನ್ನು ತೆರೆಯಲಾಗುವುದು’ ಎಂದರು.</p>.<p>ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಇಲ್ಲೂರು, ನಿರ್ದೇಶಕರಾದ ರಾಮಾಂಜನೇಯ ಶೆಟ್ಟಿ, ಬಸವಂತಕುಮಾರ, ಚಂದ್ರಕಾಂತ ಇಲ್ಲೂರು, ಶಂಭುಲಿಂಗಯ್ಯಸ್ವಾಮಿ ಹಿರೇಮಠ, ಬೆನಕಯ್ಯ ಶೆಟ್ಟಿ, ಸತೀಶ ಇಲ್ಲೂರು, ಮೆಹಬೂಬ್ ಖಾನ್, ದತ್ತಾತ್ರೇಯ ಮೇಟಿ, ದೇವರಾಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>