ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಅನುದಾನ ಬಂದಿದೆ. ಇದಲ್ಲದೆ, ರಾಯಚೂರು ನಗರದ ನಾಲ್ಕು ವಿಶೇಷ ಶಾಲೆಗಳಿಂದ ಅಧಿಕಾರಿಗಳು ಹಣ ಸಂಗ್ರಹಿಸಿದ್ದಾರೆ. ಆದರೆ, ವ್ಯವಸ್ಥಿತ ಕಾರ್ಯಕ್ರಮ ಮಾಡಿಲ್ಲ. ಜಿಲ್ಲೆಯ ವಿವಿಧ ಭಾಗಗಳಿಂದ ಕಷ್ಟಪಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಂಗವಿಕಲರಿಗೆ ಒಣ ಅನ್ನ ಕೊಟ್ಟಿದ್ದಾರೆ. ಕನಿಷ್ಠ ಅದಕ್ಕೊಂದು ಸಾಂಬಾರು, ಚಟ್ನಿಯನ್ನೂ ನೀಡಿಲ್ಲ. ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.