ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ರಾತ್ರಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದಿನ ಆವರಣ, ದೇವರಾಜ ಅರಸು ಮಾರುಕಟ್ಟೆ, ಟಿಎಪಿಎಂಸಿಎಸ್ ಮೈದಾನ, ಹಿರೇಹಳ್ಳದ ದಂಡೆ ಮತ್ತಿತರ ಖಾಲಿ ಮೈದಾನಗಳಲ್ಲಿ ಕಾಮಣ್ಣನ ಪ್ರತಿಕೃತಿಯನ್ನು ಇಟ್ಟು ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಸುತ್ತ ಇಟ್ಟು ಬೆಂಕಿ ಹಚ್ಚಿ ದಹಿಸಿದರು. ಅದರ ಸುತ್ತಲೂ ಬೊಬ್ಬೆ ಹೊಡೆಯುತ್ತ ‘ಕಾಮಣ್ಣ ಮಕ್ಕಳೋ...’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಕೆಲವರು ಕಾಮಣ್ಣ ಸುಟ್ಟ ಬೂದಿಯನ್ನು ಮನೆಗೆ ತೆಗೆದುಕೊಂಡು ಹೋದ ದೃಶ್ಯ ಕಂಡುಬಂದಿತು.