ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಜನರು ದೂರು ನೀಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ, ಮನೆಯಿಂದ ಯಾರೂ ಹೊರಗೆ ಬರದಂತೆ, ಹೊರಗಿನವರು ಮನೆಯತ್ತ ಹೋಗದಂತೆ ಆ ಮನೆಗೆ ಪೊಲೀಸರು ಕೆಲಕಾಲ ಬಂದೋಬಸ್ತ್ ಏರ್ಪಡಿಸಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿಯು ಮನೆಗೆ ತಲುಪಿ ಸದಸ್ಯರನ್ನು ವಿಚಾರಿಸಿದರು. ಮುಂದಿನ 14 ದಿನಗಳವರೆಗೆ ಯಾರೂ ಹೊರಬರದಂತೆ ಸೂಚಿಸಿದರು. ಪ್ರತಿದಿನ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ. ಆತಂಕ ಪಡಬಾರದು ಎಂದು ತಿಳಿಸಿದರು.