<p><strong>ಜಾಲಹಳ್ಳಿ</strong>: ಪಟ್ಟಣದ ಮಾನಸಿಕ ಅಸ್ವಸ್ಥೆ ರಂಗಮ್ಮ ಅವರನ್ನು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ ಭಾನುವಾರ ರಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. </p>.<p>ಕಳೆದ ಒಂದು ವರ್ಷದಿಂದ ರಂಗಮ್ಮ ಅರೆ ಬಟ್ಟೆಯಲ್ಲಿಯೇ ತಿಂಥಣಿ ಬ್ರಿಡ್ಜ್, ದೇವದುರ್ಗ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು. ಎಲ್ಲೆಂದರಲ್ಲಿ ಮಲಗುವುದು, ಅಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ಜನ ಬೇಸತ್ತು ಹೋಗಿದ್ದರು.</p>.<p>ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಪಿಎಸ್ಐ ವೈಶಾಲಿ ಝಳಕಿ ಅವರು ಮಾನಸಿಕ ಅಸ್ವಸ್ಥೆ ರಂಗಮ್ಮ ಅವರ ಕುಟುಂಬಸ್ಥರಿಗೆ ಅನೇಕ ಬಾರಿ ಚಿಕಿತ್ಸೆ ಕೊಡಿಸಲು ಸಲಹೆ ನೀಡಿದ್ದರು. </p>.<p>ಗ್ರಾ.ಪಂ ಸದಸ್ಯರಾದ ಕುಮಾರ ಚಪ್ಪಳಕಿ, ಸರಸ್ವತಿ ತೊಗರಿ, ಸಲ್ಮಾಬೇಗಂ ನಾಶಿ, ಹುಲಗಮ್ಮ, ರಾಜು ತವಗ, ಮಕ್ತೂಮ್ ಪಾರಸಿ, ಪಿಡಿಒ ನರಸಪ್ಪ ಸೇರಿ ಕುಟುಂಬದವರಿಗೆ ತಿಳಿ ಹೇಳಿ ಶನಿವಾರದಿಂದ ನಿರಂತರವಾಗಿ ಪ್ರಯತ್ನ ಮಾಡಿ ಭಾನುವಾರ ಆಸ್ಪತ್ರೆಯ ಆಂಬುಲೆನ್ಸ್ನಲ್ಲಿ ಸಾಗಿಸಿದರು.</p>.<p>ರಿಮ್ಸ್ ಆಸ್ಪತ್ರೆಯ ವೈದ್ಯರ ಜತೆ ನಾನು ಮಾತನಾಡಿದ್ದೇನೆ. ಮಾನಸಿಕ ಅಸ್ವಸ್ಥ ಮಹಿಳೆ ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖರಾದ ಮೇಲೆ ನಾವು ಮರಳಿ ಕಳಿಸುತ್ತೇವೆ ಎಂದು ನನಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಪಿಎಸ್ಐ ವೈಶಾಲಿ ಝಳಕಿ’ ಪ್ರಜಾವಾಣಿಗೆ ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲಹಳ್ಳಿ</strong>: ಪಟ್ಟಣದ ಮಾನಸಿಕ ಅಸ್ವಸ್ಥೆ ರಂಗಮ್ಮ ಅವರನ್ನು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ ಭಾನುವಾರ ರಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. </p>.<p>ಕಳೆದ ಒಂದು ವರ್ಷದಿಂದ ರಂಗಮ್ಮ ಅರೆ ಬಟ್ಟೆಯಲ್ಲಿಯೇ ತಿಂಥಣಿ ಬ್ರಿಡ್ಜ್, ದೇವದುರ್ಗ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು. ಎಲ್ಲೆಂದರಲ್ಲಿ ಮಲಗುವುದು, ಅಲ್ಲಿಯೇ ಮಲ–ಮೂತ್ರ ವಿಸರ್ಜನೆ ಮಾಡುತ್ತಿದ್ದರಿಂದ ಜನ ಬೇಸತ್ತು ಹೋಗಿದ್ದರು.</p>.<p>ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಹಾಗೂ ಪಿಎಸ್ಐ ವೈಶಾಲಿ ಝಳಕಿ ಅವರು ಮಾನಸಿಕ ಅಸ್ವಸ್ಥೆ ರಂಗಮ್ಮ ಅವರ ಕುಟುಂಬಸ್ಥರಿಗೆ ಅನೇಕ ಬಾರಿ ಚಿಕಿತ್ಸೆ ಕೊಡಿಸಲು ಸಲಹೆ ನೀಡಿದ್ದರು. </p>.<p>ಗ್ರಾ.ಪಂ ಸದಸ್ಯರಾದ ಕುಮಾರ ಚಪ್ಪಳಕಿ, ಸರಸ್ವತಿ ತೊಗರಿ, ಸಲ್ಮಾಬೇಗಂ ನಾಶಿ, ಹುಲಗಮ್ಮ, ರಾಜು ತವಗ, ಮಕ್ತೂಮ್ ಪಾರಸಿ, ಪಿಡಿಒ ನರಸಪ್ಪ ಸೇರಿ ಕುಟುಂಬದವರಿಗೆ ತಿಳಿ ಹೇಳಿ ಶನಿವಾರದಿಂದ ನಿರಂತರವಾಗಿ ಪ್ರಯತ್ನ ಮಾಡಿ ಭಾನುವಾರ ಆಸ್ಪತ್ರೆಯ ಆಂಬುಲೆನ್ಸ್ನಲ್ಲಿ ಸಾಗಿಸಿದರು.</p>.<p>ರಿಮ್ಸ್ ಆಸ್ಪತ್ರೆಯ ವೈದ್ಯರ ಜತೆ ನಾನು ಮಾತನಾಡಿದ್ದೇನೆ. ಮಾನಸಿಕ ಅಸ್ವಸ್ಥ ಮಹಿಳೆ ಚಿಕಿತ್ಸೆ ನಂತರ ಸಂಪೂರ್ಣ ಗುಣಮುಖರಾದ ಮೇಲೆ ನಾವು ಮರಳಿ ಕಳಿಸುತ್ತೇವೆ ಎಂದು ನನಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಪಿಎಸ್ಐ ವೈಶಾಲಿ ಝಳಕಿ’ ಪ್ರಜಾವಾಣಿಗೆ ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>