<p><strong>ರಾಯಚೂರು:</strong> ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಪುರುಷ ಹಾಗೂ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದುಕೊಂಡು ಇತಿಹಾಸ ಸೃಷ್ಟಿಸಿದವು.</p>.<p>ಬ್ಯಾಸ್ಕೆಟ್ಬಾಲ್ ಪುರುಷರ ಫೈನಲ್ನಲ್ಲಿ ರಾಯಚೂರು ತಂಡವು ಬಳ್ಳಾರಿ ತಂಡವನ್ನು 73–26 ಅಂಕಗಳಿಂದ ಪರಾಭವಗೊಳಿಸಿ ಟ್ರೋಫಿ ಗೆದ್ದುಕೊಂಡಿತು.</p>.<p>ಮೊದಲ ಸೆಮಿಫೈನಲ್ನಲ್ಲಿ ಬಳ್ಳಾರಿ ತಂಡವು ಕಲಬುರಗಿ ತಂಡವನ್ನು 58–40 ಅಂಕಗಳಿಂದ ಸೋಲಿಸಿ ದರೆ, ಇನ್ನೊಂದು ಫೈನಲ್ನಲ್ಲಿ ರಾಯಚೂರು ತಂಡವು ಕೊಪ್ಪಳ ತಂಡವನ್ನು 52–18 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.</p>.<p>ರಾಯಚೂರು ತಂಡವನ್ನು ಸಂದೀಪ ಶೇಖರ, ವೈಭವ ಚೌಧರಿ, ಅಜಯಕುಮಾರ ಕೆ.ಬ್ರಹ್ಮಯ್ಯ, ಶ್ರವಣಕುಮಾರ ಶಮಶಾಲಪ್ಪ, ವೆಂಕಟೇಶ್ ಎಲ್, ಕಾರ್ತಿಕ ರೆಡ್ಡಿ, ಶಿವಶರಣ ರೆಡ್ಡಿ, ಬರ್ನಾಬಾಸ್ ಶಮಶಾಲಪ್ಪ, ಅಭಿಷೇಕಕುಮಾರ, ಸೃಜನ ಸಿ.ಬಿ. ವಿಭವ, ಆಕಾಶಕುಮಾರ ಪ್ರತಿನಿಧಿಸಿದ್ದರು.</p>.<p>ಪುರುಷರ ವಿಭಾಗದಲ್ಲಿ ಒಟ್ಟು ಆರು ತಂಡಗಳು ನೋಂದಣಿ ಮಾಡಿಕೊಂಡಿದ್ದವು.</p>.<p><br>ಮಹಿಳೆಯರ ವಿಭಾಗ: ರಾಯಚೂರು ತಂಡಕ್ಕೆ ಟ್ರೋಫಿ</p>.<p>ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಟ್ರೋಫಿ ಗೆದ್ದುಕೊಂಡಿದೆ.</p>.<p>ರಾಯಚೂರು ತಂಡವು ಬಳ್ಳಾರಿ ತಂಡವನ್ನು 10–8 ಅಂಕಗಳಿಂದ ಸೋಲಿಸಿತು. ಬಳ್ಳಾರಿ ಕ್ರೀಡಾಪಟುಗಳು ಪ್ರಬಲ ಸ್ಪರ್ಧೆ ಒಡ್ಡಿದರೂ ರಾಯಚೂರು ತಂಡದವರು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದುಕೊಂಡರು.</p>.<p>ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಮೂರು ತಂಡಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದವು. ಮೊದಲ ಸೆಮಿಫೈನಲ್ನಲ್ಲಿ ಬೀದರ್–ಬಳ್ಳಾರಿ ಮಧ್ಯೆ ನಡೆದ ಪಂದ್ಯದಲ್ಲಿ ಬೀದರ್ ತಂಡ 8–2 ಅಂಕಗಳಿಂದ ಹೀನಾಯವಾಗಿ ಸೋಲು ಅನುಭವಿಸಿತು.</p>.<p>ಇನ್ನೊಂದು ಸೆಮಿಫೈನಲ್ನಲ್ಲಿ ಒಂದು ತಂಡ ಬಾರದ ಕಾರಣ ರಾಯಚೂರು ನೇರವಾಗಿ ಫೈನಲ್ ಪ್ರವೇಶಿಸಿತು. ಫೈನಲ್ನಲ್ಲಿ ಬಳ್ಳಾರಿ ತಂಡವನ್ನು ಸೋಲಿಸಿತು.</p>.<p>ರಾಯಚೂರು ತಂಡವನ್ನು ಶ್ವೇತಾ ಪಾಟೀಲ, ಇಂದ್ರಜಾ ಜಿ, ತ್ವಿಶಾ ಕಳಸೆಕರ್, ಕೀರ್ತಿ, ಪೂಜಲಾ ಯಮಿನಿ, ಸ್ನೇಹಾ ಪಾಟೀಲ, ಲಕ್ಷ್ಮಿ, ಲಕ್ಷಿತಾ, ಸಮುಂದ್ಯಥಾ, ವೈಷ್ಣವಿ ಪಿ.ಕೆ, ಅನುಶಾ ಸೋನಬಾಳ್, ರಮ್ಯಕೃಷ್ಣ ಪಟವಾರಿ ತಂಡವನ್ನು ಪ್ರತಿನಿಧಿಸಿದ್ದರು.</p>.<p>ಮಹಿಳೆಯರ ವಿಭಾಗದಲ್ಲಿ ಕೇವಲ ಮೂರು ತಂಡಗಳು ಹೆಸರು ನೋಂದಣಿ ಮಾಡಿಕೊಂಡಿದ್ದವು. ನಿರ್ಣಾಯಕರಾಗಿ ರಮೇಶ ಸಾಂಬಾಳ, ನರಸಿಂಹ, ರೂಪೇಶ, ವೆಂಕಟೇಶ ಹಾಗೂ ಶ್ರವಣ ಕಾರ್ಯನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಪುರುಷ ಹಾಗೂ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದುಕೊಂಡು ಇತಿಹಾಸ ಸೃಷ್ಟಿಸಿದವು.</p>.<p>ಬ್ಯಾಸ್ಕೆಟ್ಬಾಲ್ ಪುರುಷರ ಫೈನಲ್ನಲ್ಲಿ ರಾಯಚೂರು ತಂಡವು ಬಳ್ಳಾರಿ ತಂಡವನ್ನು 73–26 ಅಂಕಗಳಿಂದ ಪರಾಭವಗೊಳಿಸಿ ಟ್ರೋಫಿ ಗೆದ್ದುಕೊಂಡಿತು.</p>.<p>ಮೊದಲ ಸೆಮಿಫೈನಲ್ನಲ್ಲಿ ಬಳ್ಳಾರಿ ತಂಡವು ಕಲಬುರಗಿ ತಂಡವನ್ನು 58–40 ಅಂಕಗಳಿಂದ ಸೋಲಿಸಿ ದರೆ, ಇನ್ನೊಂದು ಫೈನಲ್ನಲ್ಲಿ ರಾಯಚೂರು ತಂಡವು ಕೊಪ್ಪಳ ತಂಡವನ್ನು 52–18 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.</p>.<p>ರಾಯಚೂರು ತಂಡವನ್ನು ಸಂದೀಪ ಶೇಖರ, ವೈಭವ ಚೌಧರಿ, ಅಜಯಕುಮಾರ ಕೆ.ಬ್ರಹ್ಮಯ್ಯ, ಶ್ರವಣಕುಮಾರ ಶಮಶಾಲಪ್ಪ, ವೆಂಕಟೇಶ್ ಎಲ್, ಕಾರ್ತಿಕ ರೆಡ್ಡಿ, ಶಿವಶರಣ ರೆಡ್ಡಿ, ಬರ್ನಾಬಾಸ್ ಶಮಶಾಲಪ್ಪ, ಅಭಿಷೇಕಕುಮಾರ, ಸೃಜನ ಸಿ.ಬಿ. ವಿಭವ, ಆಕಾಶಕುಮಾರ ಪ್ರತಿನಿಧಿಸಿದ್ದರು.</p>.<p>ಪುರುಷರ ವಿಭಾಗದಲ್ಲಿ ಒಟ್ಟು ಆರು ತಂಡಗಳು ನೋಂದಣಿ ಮಾಡಿಕೊಂಡಿದ್ದವು.</p>.<p><br>ಮಹಿಳೆಯರ ವಿಭಾಗ: ರಾಯಚೂರು ತಂಡಕ್ಕೆ ಟ್ರೋಫಿ</p>.<p>ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ನಡೆಸಿದ 2024–25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ವಿಭಾಗದ ಬ್ಯಾಸ್ಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಟ್ರೋಫಿ ಗೆದ್ದುಕೊಂಡಿದೆ.</p>.<p>ರಾಯಚೂರು ತಂಡವು ಬಳ್ಳಾರಿ ತಂಡವನ್ನು 10–8 ಅಂಕಗಳಿಂದ ಸೋಲಿಸಿತು. ಬಳ್ಳಾರಿ ಕ್ರೀಡಾಪಟುಗಳು ಪ್ರಬಲ ಸ್ಪರ್ಧೆ ಒಡ್ಡಿದರೂ ರಾಯಚೂರು ತಂಡದವರು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದುಕೊಂಡರು.</p>.<p>ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಪೈಕಿ ಮೂರು ತಂಡಗಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದವು. ಮೊದಲ ಸೆಮಿಫೈನಲ್ನಲ್ಲಿ ಬೀದರ್–ಬಳ್ಳಾರಿ ಮಧ್ಯೆ ನಡೆದ ಪಂದ್ಯದಲ್ಲಿ ಬೀದರ್ ತಂಡ 8–2 ಅಂಕಗಳಿಂದ ಹೀನಾಯವಾಗಿ ಸೋಲು ಅನುಭವಿಸಿತು.</p>.<p>ಇನ್ನೊಂದು ಸೆಮಿಫೈನಲ್ನಲ್ಲಿ ಒಂದು ತಂಡ ಬಾರದ ಕಾರಣ ರಾಯಚೂರು ನೇರವಾಗಿ ಫೈನಲ್ ಪ್ರವೇಶಿಸಿತು. ಫೈನಲ್ನಲ್ಲಿ ಬಳ್ಳಾರಿ ತಂಡವನ್ನು ಸೋಲಿಸಿತು.</p>.<p>ರಾಯಚೂರು ತಂಡವನ್ನು ಶ್ವೇತಾ ಪಾಟೀಲ, ಇಂದ್ರಜಾ ಜಿ, ತ್ವಿಶಾ ಕಳಸೆಕರ್, ಕೀರ್ತಿ, ಪೂಜಲಾ ಯಮಿನಿ, ಸ್ನೇಹಾ ಪಾಟೀಲ, ಲಕ್ಷ್ಮಿ, ಲಕ್ಷಿತಾ, ಸಮುಂದ್ಯಥಾ, ವೈಷ್ಣವಿ ಪಿ.ಕೆ, ಅನುಶಾ ಸೋನಬಾಳ್, ರಮ್ಯಕೃಷ್ಣ ಪಟವಾರಿ ತಂಡವನ್ನು ಪ್ರತಿನಿಧಿಸಿದ್ದರು.</p>.<p>ಮಹಿಳೆಯರ ವಿಭಾಗದಲ್ಲಿ ಕೇವಲ ಮೂರು ತಂಡಗಳು ಹೆಸರು ನೋಂದಣಿ ಮಾಡಿಕೊಂಡಿದ್ದವು. ನಿರ್ಣಾಯಕರಾಗಿ ರಮೇಶ ಸಾಂಬಾಳ, ನರಸಿಂಹ, ರೂಪೇಶ, ವೆಂಕಟೇಶ ಹಾಗೂ ಶ್ರವಣ ಕಾರ್ಯನಿರ್ವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>