ಗುಲ್ಬರ್ಗಾ ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಪಾಟೀಲ ಜೋಳದಹೆಡಗಿ ಮಾತನಾಡಿ, ಕನ್ನಡವು ಒಂದು ಶಕ್ತಿ, ಪ್ರೀತಿ, ತಾಳ್ಮೆ, ಸಂಭ್ರಮ ಅಷ್ಟೇ ಅಲ್ಲದೇ ಮಾನವೀಯ ಮೌಲ್ಯಗಳನ್ನು ಒಳಗೊಂಡ ಒಂದು ಸಂಸ್ಕೃತಿಯ ಸಂಸ್ಕಾರವಾಗಿದೆ. ಕನ್ನಡ ಮತ್ತು ಸಾಹಿತ್ಯ ಶಿಕ್ಷಣದ ಮೂಲಕ ನಮಗೆಲ್ಲಾ ಸಂಸ್ಕಾರ ಕೊಡುವುದರ ಜೊತೆಗೆ ಬದುಕನ್ನು ಕಟ್ಟಿಕೊಡುತ್ತಿದೆ ಎಂದರು.