‘ಜೀವನದಲ್ಲಿ ಇನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಮನನೊಂದು ಕೊನೆಗೆ ದಾರಿ ಇಲ್ಲದೆ ರೈತ ಮತ್ತು ಆತನ ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್ನವರು ಬಹಳ ಹಗುರವಾಗಿ ಮಾತನಾಡಿದ್ದಾರೆ. 135 ಸೀಟು ಬಂದ ಮೇಲೆ ಕಾಂಗ್ರೆಸ್ನವರಿಗೆ ಅಹಂಕಾರ ಬಂದಿದೆ. ಆಕಾಶಕ್ಕೆ ಏರಿದ್ದಾರೆ. ಇಂದಿರಾ ಗಾಂಧಿ ಅವರಂಥ ಸರ್ವಾಧಿಕಾರಿಗೇ ಪ್ರಜಾಪ್ರಭುತ್ವದಲ್ಲಿ ಉಳಿಯಲು ಆಗಲಿಲ್ಲ. ಇನ್ನು ಉಳಿದವರೇನು ಮಹಾ’ ಎಂದು ಟೀಕಿಸಿದರು.