<p>ರಾಯಚೂರು: ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಲು ಯತ್ನಿಸಿ ಹಣ ದೋಚಲು ಮುಂದಾಗಿದ್ದ ಐವರು ದುಷ್ಕರ್ಮಿಗಳನ್ನು ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. </p>.<p>ರಾಯಚೂರು ತಾಲ್ಲೂಕಿನ ಶಕ್ತಿನಗರ ಮುಖ್ಯರಸ್ತೆಯಲ್ಲಿ ಆರ್. ನರೇಂದ್ರ ಕುಮಾರ್ ಎನ್ನುವವರು ತಾಯಮ್ಮ ಗುಡಿ ಸಮೀಪದ ಕಾರ್ಖಾನೆಯಿಂದ ಕಾರಿನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಅಪಘಾತದ ನಾಟಕವಾಡಿದ ದುಷ್ಕರ್ಮಿಗಳು ನರೇಂದ್ರಕುಮಾರ ಅವರು ಕಾರಿನಿಂದ ಇಳಿದಾಗ ಅಪಹರಣ ಮಾಡಿದ 5 ಜನ ಆರೋಪಿಗಳು ₹50ಸಾವಿರ ಹಣ ಹಾಗೂ ಮೊಬೈಲ್ ದೋಚಿದ್ದಾರೆ.</p>.<p>ಅಪಹರಣ ಮಾಡಿ ಕುಕನೂರು ರೈಲ್ವೆ ಬ್ರಿಡ್ಜ್ ಬಳಿ ಕರೆದುಕೊಂಡು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ನರೇಂದ್ರಕುಮಾರ ತನ್ನಲ್ಲಿ ಇಷ್ಟೇ ಇದೆ ಹಣ ಎಂದು ಹೇಳಿದಾಗ ದುರ್ಷರ್ಮಿಯೊಬ್ಬ ಚಾಕುವಿನಿಂದ ಬುಜಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ.</p>.<p>ಘಟನೆ ಬಳಿಕ ಗಾಯಗೊಂಡ ನರೇಂದ್ರಕುಮಾರ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಗಳಾದ ರಿಯಾಜ್ ಪಾಶ, ಶೇಖ್ ಮುಕ್ತಿಯಾರ್, ಗುರುರಾಜ, ಶೇಕ್ ಅಬ್ದುಲ್ಲಾ ಹಾಗೂ ಗುರುಕುಮಾರನನ್ನು ಬಂಧಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಲು ಯತ್ನಿಸಿ ಹಣ ದೋಚಲು ಮುಂದಾಗಿದ್ದ ಐವರು ದುಷ್ಕರ್ಮಿಗಳನ್ನು ರಾಯಚೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. </p>.<p>ರಾಯಚೂರು ತಾಲ್ಲೂಕಿನ ಶಕ್ತಿನಗರ ಮುಖ್ಯರಸ್ತೆಯಲ್ಲಿ ಆರ್. ನರೇಂದ್ರ ಕುಮಾರ್ ಎನ್ನುವವರು ತಾಯಮ್ಮ ಗುಡಿ ಸಮೀಪದ ಕಾರ್ಖಾನೆಯಿಂದ ಕಾರಿನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಅಪಘಾತದ ನಾಟಕವಾಡಿದ ದುಷ್ಕರ್ಮಿಗಳು ನರೇಂದ್ರಕುಮಾರ ಅವರು ಕಾರಿನಿಂದ ಇಳಿದಾಗ ಅಪಹರಣ ಮಾಡಿದ 5 ಜನ ಆರೋಪಿಗಳು ₹50ಸಾವಿರ ಹಣ ಹಾಗೂ ಮೊಬೈಲ್ ದೋಚಿದ್ದಾರೆ.</p>.<p>ಅಪಹರಣ ಮಾಡಿ ಕುಕನೂರು ರೈಲ್ವೆ ಬ್ರಿಡ್ಜ್ ಬಳಿ ಕರೆದುಕೊಂಡು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ನರೇಂದ್ರಕುಮಾರ ತನ್ನಲ್ಲಿ ಇಷ್ಟೇ ಇದೆ ಹಣ ಎಂದು ಹೇಳಿದಾಗ ದುರ್ಷರ್ಮಿಯೊಬ್ಬ ಚಾಕುವಿನಿಂದ ಬುಜಕ್ಕೆ ಚುಚ್ಚಿ ಗಾಯಗೊಳಿಸಿದ್ದಾನೆ.</p>.<p>ಘಟನೆ ಬಳಿಕ ಗಾಯಗೊಂಡ ನರೇಂದ್ರಕುಮಾರ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಗಳಾದ ರಿಯಾಜ್ ಪಾಶ, ಶೇಖ್ ಮುಕ್ತಿಯಾರ್, ಗುರುರಾಜ, ಶೇಕ್ ಅಬ್ದುಲ್ಲಾ ಹಾಗೂ ಗುರುಕುಮಾರನನ್ನು ಬಂಧಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>