ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಹಳ್ಳಕ್ಕೆ ಮಗುಚಿದ ಲಾರಿ, ಕೊಚ್ಚಿ ಹೋದ ಭತ್ತದ ಚೀಲಗಳು

Last Updated 21 ನವೆಂಬರ್ 2021, 12:45 IST
ಅಕ್ಷರ ಗಾತ್ರ

ಕವಿತಾಳ (ರಾಯಚೂರು): ಸಿರವಾರ ತಾಲ್ಲೂಕಿನ ಮಲ್ಲನಗುಡ್ಡ ಕ್ಯಾಂಪ್‌ ರೈತ ಪಾಪಾರಾವ್‌ ಅವರಿಗೆ ಸೇರಿದ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯು ಸೊಸೈಟಿ ಕ್ಯಾಂಪ್‌ ಬಳಿ ಭಾನುವಾರ ಮಗುಚಿದ್ದು, ಭತ್ತದ ಚೀಲಗಳು ನೀರುಪಾಲಾಗಿವೆ.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ಸೇತುವೆ ಮೇಲೆ ನೀರು ಹರಿದುಹೋಗಿದೆ. ಲಾರಿ ಸಂಚರಿಸುವಾಗ ಸೇತುವೆ ಕುಸಿದಿರುವುದು ಲಾರಿ ಮಗುಚುವುದಕ್ಕೆ ಕಾರಣ. 350 ಕ್ಕೂ ಹೆಚ್ಚು ಭತ್ತದ ಚೀಲಗಳು ಲಾರಿಯಲ್ಲಿದ್ದವು. 100 ಕ್ಕೂ ಹೆಚ್ಚು ಚೀಲಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT