ಆನಂತರ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ‘ಜಾತಿ, ಮತ, ಭಾಷೆ ಹಾಗೂ ಪ್ರಾಂತಕ್ಕೆ ಅತೀತರಾಗಿ ಸರ್ವರಿಂದಲೂ ಆರಾಧ್ಯರೂ, ಭಗವಂತನಿಂದ ವಿಶೇಷ ಅನುಗ್ರಹ ಪಾತ್ರರು ಆದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವವು ಶುಭದಿನವಾಗಿದೆ. ಶೇಷವಸ್ತ್ರ ಸಮರ್ಪಣೆ ಕಾರ್ಯಕ್ರಮವು ತಿರುಪತಿ ತಿರುಮಲ ದೇವಸ್ಥಾನ ಹಾಗೂ ಮಂತ್ರಾಲಯ ಮಠದ ನೀತಿ ನಿಯಮಗಳನುಸಾರ ಅನುಚಾನವಾಗಿ ನಡೆದುಕೊಂಡು ಬಂದಿದೆ’ ಎಂದರು.