<p><strong>ಮಸ್ಕಿ</strong>: ಶರನ್ನವರಾತ್ರಿ ಅಂಗವಾಗಿ ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ (ಸೆ.22)ದಿಂದ ಅ.7ರವರೆಗೆ ಮಹಾದೇವಿಯ 55ನೇ ವರ್ಷದ ಪುರಾಣ ಪ್ರವಚನ ನಡೆಯಲಿದೆ.</p>.<p>ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ಘಟಸ್ಥಾಪನೆಯೊಂದಿಗೆ ಶರನ್ನವರಾತ್ರಿ ಆಚರಣೆಗೆ ಅಂಕಲಿಮಠದ ವೀರಭದ್ರ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. 22ರಿಂದ 1 ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ರವರೆಗೆ ದೇವಿಪುರಾಣ ನಡೆಯಲಿದೆ.</p>.<p>ಪುರಾಣ ಪ್ರವಚನವನ್ನು ಶರಭಯ್ಯ ಶಾಸ್ತ್ರಿ ಕಂಬಾಳಿಮಠ ನಡೆಸಿಕೊಡಲಿದ್ದಾರೆ. ಮಹೇಶಕುಮಾರ ಹೆರೂರು, ಮಹಾಂತೇಶ ಕಾಳಗಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.</p>.<p>ಅ.1ರಂದು ಪುರಾಣ ಮುಕ್ತಾಯವಾಗಲಿದ್ದು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.</p>.<p>ಅ.2ರಂದು ವಿಜಯದಶಮಿ ಇದ್ದು, ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.</p>.<p>3ರಿಂದ 6 ರವರೆಗೆ ಮೂರು ದಿನ ವಿಶೇಷ ಕಾರ್ಯಕ್ರಮ ಹಾಗೂ ಉಪನ್ಯಾಸ ನಡೆಯಲಿದೆ. 7 ರಂದು ಶರನ್ನವರಾತ್ರಿ ಮುಕ್ತಾಯದ ಅಂಗವಾಗಿ ಬೆಳಿಗ್ಗೆ ಗಂಗಾಸ್ಥಳದಿಂದ ಜಂಬೂ ಸವಾರಿ ಮೆರವಣಿಗೆಯು ಸಾವಿರ ಪೂರ್ಣಕುಂಭ, ಕಳಸ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.</p>.<p>ನಂತರ ಭ್ರಮರಾಂಬ ದೇವಿಗೆ ಅಭಿಷೇಕ, ಮಹಾಪ್ರಸಾದ ನಡೆಯಲಿದೆ. ಸಂಜೆ 5 ಗಂಟೆಗೆ ಭ್ರಮರಾಂಬ ದೇವಿಯ ರಥವನ್ನು ಮಹಿಳೆಯರು ಎಳೆಯುವ ಮೂಲಕ ಶರನ್ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ</strong>: ಶರನ್ನವರಾತ್ರಿ ಅಂಗವಾಗಿ ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ (ಸೆ.22)ದಿಂದ ಅ.7ರವರೆಗೆ ಮಹಾದೇವಿಯ 55ನೇ ವರ್ಷದ ಪುರಾಣ ಪ್ರವಚನ ನಡೆಯಲಿದೆ.</p>.<p>ಸೋಮವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ಘಟಸ್ಥಾಪನೆಯೊಂದಿಗೆ ಶರನ್ನವರಾತ್ರಿ ಆಚರಣೆಗೆ ಅಂಕಲಿಮಠದ ವೀರಭದ್ರ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. 22ರಿಂದ 1 ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30 ರವರೆಗೆ ದೇವಿಪುರಾಣ ನಡೆಯಲಿದೆ.</p>.<p>ಪುರಾಣ ಪ್ರವಚನವನ್ನು ಶರಭಯ್ಯ ಶಾಸ್ತ್ರಿ ಕಂಬಾಳಿಮಠ ನಡೆಸಿಕೊಡಲಿದ್ದಾರೆ. ಮಹೇಶಕುಮಾರ ಹೆರೂರು, ಮಹಾಂತೇಶ ಕಾಳಗಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.</p>.<p>ಅ.1ರಂದು ಪುರಾಣ ಮುಕ್ತಾಯವಾಗಲಿದ್ದು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.</p>.<p>ಅ.2ರಂದು ವಿಜಯದಶಮಿ ಇದ್ದು, ಸಾಮೂಹಿಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.</p>.<p>3ರಿಂದ 6 ರವರೆಗೆ ಮೂರು ದಿನ ವಿಶೇಷ ಕಾರ್ಯಕ್ರಮ ಹಾಗೂ ಉಪನ್ಯಾಸ ನಡೆಯಲಿದೆ. 7 ರಂದು ಶರನ್ನವರಾತ್ರಿ ಮುಕ್ತಾಯದ ಅಂಗವಾಗಿ ಬೆಳಿಗ್ಗೆ ಗಂಗಾಸ್ಥಳದಿಂದ ಜಂಬೂ ಸವಾರಿ ಮೆರವಣಿಗೆಯು ಸಾವಿರ ಪೂರ್ಣಕುಂಭ, ಕಳಸ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.</p>.<p>ನಂತರ ಭ್ರಮರಾಂಬ ದೇವಿಗೆ ಅಭಿಷೇಕ, ಮಹಾಪ್ರಸಾದ ನಡೆಯಲಿದೆ. ಸಂಜೆ 5 ಗಂಟೆಗೆ ಭ್ರಮರಾಂಬ ದೇವಿಯ ರಥವನ್ನು ಮಹಿಳೆಯರು ಎಳೆಯುವ ಮೂಲಕ ಶರನ್ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>