ಇಂದಿರಾನಗರ, ಜಹೀರಾಬಾದ್, ಸತ್ಯನಾಥ ಕಾಲೋನಿ, ಗಂಗಾನಿವಾಸ, ಆಶೋಕ ಡಿಪೋ ಸುತ್ತಲಿನ ಜನರು ಕಲ್ಮಶಗೊಂಡ ಕೆರೆ ನೀರಿನ ಮೇಲಿಂದ ಸೂಸಿಬರುವ ಗಾಳಿಯನ್ನೇ ಉಸಿರಾಡುತ್ತಾರೆ. ಇದೇ ಗಾಳಿಯಲ್ಲಿ ಬರುವ ಸೊಳ್ಳೆ ಮತ್ತು ಇತರೆ ಕೀಟಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಕ್ಕಳು ಮತ್ತು ವಯೋವೃದ್ಧರು ಅತಿಹೆಚ್ಚಿನ ಸಂಖ್ಯೆಯಲ್ಲಿ ಜ್ವರದಿಂದ ಬಳಲುತ್ತಿದ್ದು, ಕೊಳೆಗೇರಿಯ ಜನರು ಶೀತ, ಚಳಿ ಹಾಗೂ ಜ್ವರದಿಂದ ಮುಕ್ತರಾಗಲು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಉಪಜೀವನಕ್ಕಾಗಿ ಹಣ ಕೂಡಿಟ್ಟವರು ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜೀವ ಸಾಗಿಸಲು ಕಷ್ಟಪಡುತ್ತಿದ್ದಾರೆ.