ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಸಸಿನೆಡುವ ಮೂಲಕ ಪರಿಸರವನ್ನು ಪೋಷಣೆ ಮಾಡುವುದಲ್ಲದೆ ಅದರ ಬೆಳವಣಿಗೆಗೆ ಪರಿಶ್ರಮ ವಹಿಸಬೇಕಾಗಿದೆ. ಈ ದಿನ ನಗರದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹನೀಯರನ್ನು ಆಹ್ವಾನಿಸಿ ಅವರಿಂದ ತಲಾ ಒಂದು ಸಸಿ ನೆಡಸಿ ಆ ಸಸಿಗಳಿಗೆ ಅವರ ಗುರುತಿನ ಚೀಟಿಯನ್ನು ಅಂಟಿಸಿ ಅವರುಗಳ ಹೆಸರಿನಲ್ಲಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯ ಇದಾಗಿದೆ ಎಂದು ತಿಳಿಸಿದರು.