<p><strong>ಕವಿತಾಳ:</strong> ‘ಸರ್ಕಾರಿ ಕೆಲಸದ ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರು ಸಮಾಜ ಗುರುತಿಸುವಂಥ ಸೇವೆ ಮಾಡಿದ್ದಾರೆ’ ಎಂದು ಶಿವಯ್ಯ ತಾತ ಬಳ್ಳಾರಿ ಹೇಳಿದರು.</p>.<p>ಬಾಗಲವಾಡ ಗ್ರಾಮದ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದ ಮಾತನಾಡಿದರು.</p>.<p>ಅಂಚೆ ಇಲಾಖೆಯ ಯಾದಗಿರಿ ವಿಭಾಗದ ಎಸ್.ಪಿ. ಕೃಷ್ಣ ಮೊಹಿತೆ ಮಾತನಾಡಿ,‘ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಹಳ್ಳಿ ಹಳ್ಳಿಗಳಲ್ಲೂ ಅಂಚೆ ಸೇವೆ ಸಲ್ಲಿಸುವುದು ಸುಲಭ ಸಾಧ್ಯವಾಗಿದೆ. ಮೂರು ದಶಕಗಳ ಹಿಂದೆ ಅಂಚೆ ಸೇವೆ ಒದಗಿಸುವುದು ಸವಾಲಿನ ಕೆಲಸವಾಗಿತ್ತು’ ಎಂದರು.</p>.<p>ಮುಖಂಡರಾದ ಕೃಷ್ಣಪ್ಪ ನಾಯಕ, ಸಿಂಧನೂರು ಉಪ ವಿಭಾಗದ ಅಂಚೆ ನಿರೀಕ್ಷಕ ರವೀಂದ್ರ ನಾಯಕ, ಮಲ್ಲಿಕಾರ್ಜುನ, ಬಸವರಾಜಯ್ಯ ಸ್ವಾಮಿ ಹಿರೇಮಠ, ಮೆಹಬೂಬ ಸಾಬ್, ಕೃಷ್ಣ ಸಿರವಾರ, ವೆಂಕಣ್ಣ, ರಾಮನಗೌಡ, ದೇವರಾಜ ಮತ್ತು ಪಿ.ವೆಂಕಟೇಶ ಉಪಸ್ಥಿತರಿದ್ದರು.</p>.<p>ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು, ಸಂಘ–ಸಂಸ್ಥೆಗಳ ಮುಖ್ಯಸ್ಥರು ಪಿ.ವೆಂಕಟೇಶ ಅವರನ್ನು ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ‘ಸರ್ಕಾರಿ ಕೆಲಸದ ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರು ಸಮಾಜ ಗುರುತಿಸುವಂಥ ಸೇವೆ ಮಾಡಿದ್ದಾರೆ’ ಎಂದು ಶಿವಯ್ಯ ತಾತ ಬಳ್ಳಾರಿ ಹೇಳಿದರು.</p>.<p>ಬಾಗಲವಾಡ ಗ್ರಾಮದ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಪಿ.ವೆಂಕಟೇಶ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದ ಮಾತನಾಡಿದರು.</p>.<p>ಅಂಚೆ ಇಲಾಖೆಯ ಯಾದಗಿರಿ ವಿಭಾಗದ ಎಸ್.ಪಿ. ಕೃಷ್ಣ ಮೊಹಿತೆ ಮಾತನಾಡಿ,‘ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಹಳ್ಳಿ ಹಳ್ಳಿಗಳಲ್ಲೂ ಅಂಚೆ ಸೇವೆ ಸಲ್ಲಿಸುವುದು ಸುಲಭ ಸಾಧ್ಯವಾಗಿದೆ. ಮೂರು ದಶಕಗಳ ಹಿಂದೆ ಅಂಚೆ ಸೇವೆ ಒದಗಿಸುವುದು ಸವಾಲಿನ ಕೆಲಸವಾಗಿತ್ತು’ ಎಂದರು.</p>.<p>ಮುಖಂಡರಾದ ಕೃಷ್ಣಪ್ಪ ನಾಯಕ, ಸಿಂಧನೂರು ಉಪ ವಿಭಾಗದ ಅಂಚೆ ನಿರೀಕ್ಷಕ ರವೀಂದ್ರ ನಾಯಕ, ಮಲ್ಲಿಕಾರ್ಜುನ, ಬಸವರಾಜಯ್ಯ ಸ್ವಾಮಿ ಹಿರೇಮಠ, ಮೆಹಬೂಬ ಸಾಬ್, ಕೃಷ್ಣ ಸಿರವಾರ, ವೆಂಕಣ್ಣ, ರಾಮನಗೌಡ, ದೇವರಾಜ ಮತ್ತು ಪಿ.ವೆಂಕಟೇಶ ಉಪಸ್ಥಿತರಿದ್ದರು.</p>.<p>ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು, ಸಂಘ–ಸಂಸ್ಥೆಗಳ ಮುಖ್ಯಸ್ಥರು ಪಿ.ವೆಂಕಟೇಶ ಅವರನ್ನು ಸನ್ಮಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>