‘ಅಧ್ಯಯನ ಹೆಚ್ಚಾದಂತೆ, ಸರ್ಕಾರಿ ಅಧಿಕಾರಿ ಹೇಗಿರಬೇಕು ಎಂಬುದರ ಸ್ವರೂಪವು ವ್ಯಕ್ತಿತ್ವದೊಳಗೆ ರೂಪಗೊಳ್ಳುತ್ತಾ ಹೋಗುತ್ತದೆ. ಪ್ರತಿಯೊಂದು ವಿಷಯವನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಐಎಎಸ್, ಕೆಎಎಸ್ ಪರೀಕ್ಷೆ ಪಾಸು ಮಾಡುತ್ತೇನೆ ಎನ್ನುವ ದೃಢ ಸಂಕಲ್ಪದಿಂದ ಬದ್ಧತೆಯಿಂದ ಪ್ರಯತ್ನ ಪಟ್ಟರೆ, ಸುತ್ತಲಿನ ಪ್ರಪಂಚವು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತದೆ. ಬಂಧುಗಳು, ಗೆಳೆಯರು, ಪಾಲಕರು ಎಲ್ಲರೂ ಸಹಕಾರ ನೀಡುತ್ತಾರೆ. ‘ಜ್ಞಾನ ಮತ್ತು ಯಶಸ್ಸು ಯಾವ ಶ್ರೀಮಂತರ ಸ್ವತ್ತು ಅಲ್ಲ, ಶ್ರಮಜೀವಿಗಳ ಸ್ವತ್ತು’ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.