ಸಕಲ ಜೀವಿಗಳಿಗೆ ಶುದ್ಧಗಾಳಿ ಮುಖ್ಯ ಎಂಬುದನ್ನು ಅರಿತಿರುವ ಅವರಿಗೆ ಪರಿಸರದ ಮೇಲೆ ತುಂಬಾ ಪ್ರೀತಿ. ರಾಯಚೂರಿನ ಸರ್ಕಾರಿ ಖಾಲಿ ಜಾಗಗಳಲ್ಲಿ ಹಾಗೂ ಅವಕಾಶ ಮಾಡಿಕೊಟ್ಟ ಖಾಸಗಿಯವರ ಜಾಗಗಳಲ್ಲೂ ಸಸಿಗಳನ್ನು ಉಚಿತವಾಗಿ ನೆಡುತ್ತಿದ್ದಾರೆ. ಆರಂಭದಲ್ಲಿ ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಡುತ್ತಿದ್ದರು. ಅವರು ನಿರಂತರವಾಗಿ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಅರಣ್ಯ ಇಲಾಖೆಯವರು ಸಸಿಗಳನ್ನು ಕೊಡುವುದಕ್ಕೆ ಹಿಂದೇಟು ಹಾಕಿದರು.