ರಾಯಚೂರು: ನಗರದ ತಿಮ್ಮಾಪುರಪೇಟೆಯ ಬಾಲಮಾರೆಮ್ಮ ದೇವಸ್ಥಾನದ ಬಳಿ ಪ್ರತ್ಯಂಗಿರಾ ಹೋಮ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನಡೆಯಿತು.
ಶಾರದಾಂಬೆ ಜ್ಯೋತಿಷ್ಯಾಲಯದ ಕೆ.ನಾರಾಯಣ ಗುರುಗಳ ಸಾನಿಧ್ಯದಲ್ಲಿ ಹೋಮ ಕಾರ್ಯ ನೆರವೇರಿತು. ಲೋಕ ಕಲ್ಯಾಣ ಉದ್ದೇಶದಿಂದ ಆಯೋಜಿಸಿದ್ದ ಹೋಮ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮಹಿಳೆಯರು ಗುಲಾಬಿ ವರ್ಣದ ಸೀರೆ ಧರಿಸಿದ್ದರು ಹಾಗೂ ಪುರುಷರು ಕೇಸರಿ ವರ್ಣದ ಶಲ್ಯ, ಪಂಚೆಯೊಂದಿಗೆ ಹೋಮಕಾರ್ಯದಲ್ಲಿ ಭಾಗವಹಿಸಿದ್ದರು.
ಉಗ್ರನರಸಿಂಹ ಅವತಾರ ಶಾಂತಗೊಳಿಸಲು ತ್ರಿಶಕ್ತಿ ರೂಪವಾಗಿ ಅವತರಿಸಿದ ಪ್ರತ್ಯಂಗಿರಾ ದೇವಿಯ ಹೋಮ ಮಾಡಿದವರಿಗೆ ಜಯ ನಿಶ್ಚಿತ ಎನ್ನುವ ನಂಬಿಕೆ ಇದೆ. ಬೃಹತ್ತಾಗಿ ನಿರ್ಮಾಣ ಮಾಡಿದ್ದ ಹೋಮದ ಅಗ್ನಿಕುಂಡಾ ನಿರ್ವಹಣೆಗಾಗಿ ಬಹಳಷ್ಟು ಸಂಖ್ಯೆಯಲ್ಲಿ ಶಿಷ್ಯರು ಭಾಗವಹಿಸಿದ್ದರು.