ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಕಲ್ಯಾಣಕ್ಕಾಗಿ ಪ್ರತ್ಯಂಗಿರಾ ಹೋಮ

ತಿಮ್ಮಾಪುರ ಪೇಟೆಯಲ್ಲಿ ನಾರಾಯಣ ಗುರು ಸಾನಿಧ್ಯದಲ್ಲಿ ಆಯೋಜನೆ
Last Updated 3 ಅಕ್ಟೋಬರ್ 2022, 14:10 IST
ಅಕ್ಷರ ಗಾತ್ರ

ರಾಯಚೂರು: ನಗರದ ತಿಮ್ಮಾಪುರಪೇಟೆಯ ಬಾಲಮಾರೆಮ್ಮ ದೇವಸ್ಥಾನದ ಬಳಿ ಪ್ರತ್ಯಂಗಿರಾ ಹೋಮ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನಡೆಯಿತು.

ಶಾರದಾಂಬೆ ಜ್ಯೋತಿಷ್ಯಾಲಯದ ಕೆ.ನಾರಾಯಣ ಗುರುಗಳ ಸಾನಿಧ್ಯದಲ್ಲಿ ಹೋಮ ಕಾರ್ಯ ನೆರವೇರಿತು. ಲೋಕ ಕಲ್ಯಾಣ ಉದ್ದೇಶದಿಂದ ಆಯೋಜಿಸಿದ್ದ ಹೋಮ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮಹಿಳೆಯರು ಗುಲಾಬಿ ವರ್ಣದ ಸೀರೆ ಧರಿಸಿದ್ದರು ಹಾಗೂ ಪುರುಷರು ಕೇಸರಿ ವರ್ಣದ ಶಲ್ಯ, ಪಂಚೆಯೊಂದಿಗೆ ಹೋಮಕಾರ್ಯದಲ್ಲಿ ಭಾಗವಹಿಸಿದ್ದರು.

ಉಗ್ರನರಸಿಂಹ ಅವತಾರ ಶಾಂತಗೊಳಿಸಲು ತ್ರಿಶಕ್ತಿ ರೂಪವಾಗಿ ಅವತರಿಸಿದ ಪ್ರತ್ಯಂಗಿರಾ ದೇವಿಯ ಹೋಮ ಮಾಡಿದವರಿಗೆ ಜಯ ನಿಶ್ಚಿತ ಎನ್ನುವ ನಂಬಿಕೆ ಇದೆ. ಬೃಹತ್ತಾಗಿ ನಿರ್ಮಾಣ ಮಾಡಿದ್ದ ಹೋಮದ ಅಗ್ನಿಕುಂಡಾ ನಿರ್ವಹಣೆಗಾಗಿ ಬಹಳಷ್ಟು ಸಂಖ್ಯೆಯಲ್ಲಿ ಶಿಷ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT