<p><strong>ರಾಯಚೂರು: </strong>ಕೇಂದ್ರದ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.</p><p>ಎಪ್ಸ್ಟೀನ್ ಫೈಲ್ ಫೈಲ್ನಲ್ಲಿ ಮೋದಿ ಹೆಸರು ಉಲ್ಲೇಖವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಹಿತಾಸಕ್ತಿಯನ್ನೇ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದರು.</p><p>ಕೇಂದ್ರ ಸರ್ಕಾರ ರಷ್ಯಾದ ಬದಲು ಅಮೆರಿಕದಿಂದ ತೈಲ ಖರೀದಿಸಲು ಶುರು ಮಾಡಿದರೆ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಧಾನಿಗಳ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಸ್ಪಷ್ಠೀಕರಣ ನೀಡಲು ಸಿದ್ಧವಿಲ್ಲ ಎಂದು ಹೇಳಿದರು.</p><p>ಭಾಗಿಯಾಗಿರುವ ಆರೋಪ ಮತ್ತು ಭಾರತದ ಘನತೆ ಮತ್ತು ಅಂತರ ರಾಷ್ಟ್ರೀಯ ಸ್ಥಾನಮಾನದ ಸಂಭಾವ್ಯ ರಾಜಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಎಪ್ಸ್ಟೀನ್ ಫೈಲ್ಗಳಿಂದ ಹೊರಹೊಮ್ಮುತ್ತಿರುವ ಗಂಭೀರ ಮತ್ತು ಗೊಂದಲದ ಬಹಿರಂಗಪಡಿಸುವಿಕೆಗಳನ್ನು ಖಂಡಿಸಿ ಕರ್ನಾಟಕ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದರು.</p><p>ಜಾಗತಿಕ ಪ್ರಭಾವ, ಬಲವಂತ ಮತ್ತು ಅಧಿಕಾರ ದುರುಪಯೋಗದ ಸಂಬಂಧವನ್ನು ಎಪ್ಸ್ಟೀನ್ ಫೈಲ್ಗಳು ಬಹಿರಂಗಪಡಿಸಿರುವೆ. ಇದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. . ಭಾರತದ ಪ್ರಧಾನ ಮಂತ್ರಿಯ ಹೆಸರು ಉಲ್ಲೇಖ ಗಂಭೀರ ವಿಷಯವಾಗಿದೆ. ಇದು ನಮ್ಮ ದೇಶದ ವಿಶ್ವಾಸಾರ್ಹತೆ, ಸಾರ್ವಭೌಮತ್ವ ಮತ್ತು ಜಾಗತಿಕ ಚಿತ್ರಣದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p><p>ಈ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ಅವರು ಸ್ಪಷ್ಟ ಉತ್ತರ ನೀಡಬೇಕು. ಗಂಭೀರ ಆರೋಪಗಳ ಮುಂದೆ ಮೌನ ವಹಿಸುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಾಗಿದೆ ಎಂದು ದೂರಿದರು.</p><p>ರಾಷ್ಟ್ರಕ್ಕಿಂತ ಯಾರೂ ದೊಡ್ಡವರಲ್ಲ, ಜಾಗತಿಕ ವೇದಿಕೆಯಲ್ಲಿ ಭಾರತದ ನೈತಿಕ ಅಧಿಕಾರವನ್ನು ರಾಜಿ ಮಾಡಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು</p><p>ಸತ್ಯ ಬಹಿರಂಗವಾಗುವವರೆಗೆ ಮತ್ತು ಪ್ರಧಾನಮಂತ್ರಿ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡುವವರೆಗೆ ತನ್ನ ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸುವುದಾಗಿ ಯುವ ಕಾಂಗ್ರೆಸ್ ನಾಯಕರು ಪುನರುಚ್ಚರಿಸಿದರು.</p><p>ಪ್ರತಿಭಟನೆಯಲ್ಲಿ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟು, ಪ್ರಮುಖರಾದ ಮಹ್ಮದ್ ಶಹಬಾಜ್, ಬಿ.ಮಧುಕುಮಾರ, ಪ್ರತಾಪ ರೆಡ್ಡಿ, ಕೆ.ಇ.ಕುಮಾರ. ಶಿಪ್ಪು, ಸಾಗರ, ರಘು ಮಡಿವಾಳ, ಅಭಿ, ಅಜ್ಜು, ವಿಜಯಕುಮಾರ, ರವಿ ದುಗನೂರು, ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಕೇಂದ್ರದ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.</p><p>ಎಪ್ಸ್ಟೀನ್ ಫೈಲ್ ಫೈಲ್ನಲ್ಲಿ ಮೋದಿ ಹೆಸರು ಉಲ್ಲೇಖವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಹಿತಾಸಕ್ತಿಯನ್ನೇ ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಿದರು.</p><p>ಕೇಂದ್ರ ಸರ್ಕಾರ ರಷ್ಯಾದ ಬದಲು ಅಮೆರಿಕದಿಂದ ತೈಲ ಖರೀದಿಸಲು ಶುರು ಮಾಡಿದರೆ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಧಾನಿಗಳ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಆದರೆ, ಬಿಜೆಪಿ ಸರ್ಕಾರ ಸ್ಪಷ್ಠೀಕರಣ ನೀಡಲು ಸಿದ್ಧವಿಲ್ಲ ಎಂದು ಹೇಳಿದರು.</p><p>ಭಾಗಿಯಾಗಿರುವ ಆರೋಪ ಮತ್ತು ಭಾರತದ ಘನತೆ ಮತ್ತು ಅಂತರ ರಾಷ್ಟ್ರೀಯ ಸ್ಥಾನಮಾನದ ಸಂಭಾವ್ಯ ರಾಜಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಎಪ್ಸ್ಟೀನ್ ಫೈಲ್ಗಳಿಂದ ಹೊರಹೊಮ್ಮುತ್ತಿರುವ ಗಂಭೀರ ಮತ್ತು ಗೊಂದಲದ ಬಹಿರಂಗಪಡಿಸುವಿಕೆಗಳನ್ನು ಖಂಡಿಸಿ ಕರ್ನಾಟಕ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದರು.</p><p>ಜಾಗತಿಕ ಪ್ರಭಾವ, ಬಲವಂತ ಮತ್ತು ಅಧಿಕಾರ ದುರುಪಯೋಗದ ಸಂಬಂಧವನ್ನು ಎಪ್ಸ್ಟೀನ್ ಫೈಲ್ಗಳು ಬಹಿರಂಗಪಡಿಸಿರುವೆ. ಇದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. . ಭಾರತದ ಪ್ರಧಾನ ಮಂತ್ರಿಯ ಹೆಸರು ಉಲ್ಲೇಖ ಗಂಭೀರ ವಿಷಯವಾಗಿದೆ. ಇದು ನಮ್ಮ ದೇಶದ ವಿಶ್ವಾಸಾರ್ಹತೆ, ಸಾರ್ವಭೌಮತ್ವ ಮತ್ತು ಜಾಗತಿಕ ಚಿತ್ರಣದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p><p>ಈ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ಅವರು ಸ್ಪಷ್ಟ ಉತ್ತರ ನೀಡಬೇಕು. ಗಂಭೀರ ಆರೋಪಗಳ ಮುಂದೆ ಮೌನ ವಹಿಸುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಾಗಿದೆ ಎಂದು ದೂರಿದರು.</p><p>ರಾಷ್ಟ್ರಕ್ಕಿಂತ ಯಾರೂ ದೊಡ್ಡವರಲ್ಲ, ಜಾಗತಿಕ ವೇದಿಕೆಯಲ್ಲಿ ಭಾರತದ ನೈತಿಕ ಅಧಿಕಾರವನ್ನು ರಾಜಿ ಮಾಡಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು</p><p>ಸತ್ಯ ಬಹಿರಂಗವಾಗುವವರೆಗೆ ಮತ್ತು ಪ್ರಧಾನಮಂತ್ರಿ ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡುವವರೆಗೆ ತನ್ನ ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸುವುದಾಗಿ ಯುವ ಕಾಂಗ್ರೆಸ್ ನಾಯಕರು ಪುನರುಚ್ಚರಿಸಿದರು.</p><p>ಪ್ರತಿಭಟನೆಯಲ್ಲಿ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ ಗಟ್ಟು, ಪ್ರಮುಖರಾದ ಮಹ್ಮದ್ ಶಹಬಾಜ್, ಬಿ.ಮಧುಕುಮಾರ, ಪ್ರತಾಪ ರೆಡ್ಡಿ, ಕೆ.ಇ.ಕುಮಾರ. ಶಿಪ್ಪು, ಸಾಗರ, ರಘು ಮಡಿವಾಳ, ಅಭಿ, ಅಜ್ಜು, ವಿಜಯಕುಮಾರ, ರವಿ ದುಗನೂರು, ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>