ಸಾಧನೆ ಮಾಡಿರುವ ವಿದ್ಯಾರ್ಥಿಗಳು: ಜಿಲ್ಲೆಗೆ ಮಾನ್ವಿಯ ವೆಲ್ಲಂಕಿ ರಾಮಕೃಷ್ಣ ಪ್ರೌಢ ಶಾಲೆಯ ಸೈಯದ್ ಅಮಾನುಲ್ಲಾ ಹುಸೇನಿ 620 ಅಂಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ರಾಯಚೂರಿನ ರಿಕಬ್ಚಂದ್ ಸುಖಾಣಿ ಮದರ್ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂದೀಪ ಪಾಟೀಲ್ 619 ಅಂಕಗಳೊಂದಿಗೆ ದ್ವಿತೀಯ ಸಾಧನೆ ಮಾಡಿದ್ದಾರೆ. ಇವರ ಸಹೋದರ ಸುದೀಪ ಪಾಟೀಲ ಕೂಡ 609 ಅಂಕ ಪಡೆದಿದ್ದಾರೆ. ಮಸ್ಕಿಯ ಜೋಗಿನ್ ರಾಮಣ್ಣ ಮೆಮೋರಿಯಲ್ ಪ್ರೌಢಶಾಲೆಯ ಅಭಿಷೇಕ 618 ಅಂಕಗಳನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.