ಇದುವರೆಗೂ 1.82 ಲಕ್ಷ ಕ್ಯುಸೆಕ್ ಅಡಿ ಪ್ರವಾಹ ಇತ್ತು. ಇದರಿಂದ ಲಿಂಗಸುಗೂರು ತಾಲ್ಲೂಕು ನಡುಗಡ್ಡೆ ಗ್ರಾಮ ಶೀಲಹಳ್ಳಿ ಸೇತುವೆ ಮುಳುಗಡೆ ಆಗಿ, ಸಂಪರ್ಕ ಕಡಿತವಾಗಿತ್ತು. ಇದೀಗ ಪ್ರವಾಹ ಹೆಚ್ಚಳದಿಂದ ಕಲಬುರ್ಗಿ- ರಾಯಚೂರು ಸಂಪರ್ಕಿಸುವ ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.