<p><strong>ಕವಿತಾಳ (ರಾಯಚೂರು)</strong>: ಮಳೆಗಾಗಿ ಪ್ರಾರ್ಥಿಸಲು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಇಲ್ಲಿನ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.</p><p>ಹಿಂದೂ, ಮುಸ್ಲಿಂ ಸಮಾಜದ ರೈತರು ನಡಿಗೆ ಮೂಲಕ ಲಿಂಗದಹಳ್ಳಿಗೆ ತೆರಳಿ ಕೃಷ್ಣಾ ನದಿ ನೀರು ತಂದು ಇಲ್ಲಿನ ಐದು ದರ್ಗಾಗಳಿಗೆ ಪವಿತ್ರಜಲ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರು.</p>.<p>ದರ್ಗಾಕ್ಕೆ ಭೇಟಿ ನೀಡಿದ ಸ್ವಾಮೀಜಿ ಭಕ್ತರಿಗೆ ಸಿಹಿ ಮಾದಲಿ ವಿತರಿಸಿ, ‘ಉತ್ತಮ ಮಳೆ, ಬೆಳೆಗಾಗಿ ದರ್ಗಾಗಳಲ್ಲಿ ಪೂಜೆ ಸಲ್ಲಿಸಿದ ರೈತರ ಆಸೆ ಫಲಿಸಲಿ’ ಎಂದು ಹಾರೈಸಿದರು.</p><p>ಮುಖಂಡರಾದ ಕಿರಲಿಂಗಪ್ಪ, ಶರಣಬಸವ ಹಣಿಗಿ, ರಾಜೇಶ ಬನ್ನಿಗಿಡದ, ಖಾಜಾಪಾಶಾ ಬ್ಯಾಗವಾಟ್, ಚಾಂದಪಾಶಾ, ರಫಿ ಒಂಟಿಬಂಡಿ, ಯಲ್ಲಪ್ಪ ಕೊಡ್ಲಿ, ಆಜಂಪಾಶಾ ಧಣಿ, ಶ್ರೀನಿವಾಸ ಗುತ್ತೇದಾರ ಮತ್ತಿತರರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ (ರಾಯಚೂರು)</strong>: ಮಳೆಗಾಗಿ ಪ್ರಾರ್ಥಿಸಲು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಇಲ್ಲಿನ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.</p><p>ಹಿಂದೂ, ಮುಸ್ಲಿಂ ಸಮಾಜದ ರೈತರು ನಡಿಗೆ ಮೂಲಕ ಲಿಂಗದಹಳ್ಳಿಗೆ ತೆರಳಿ ಕೃಷ್ಣಾ ನದಿ ನೀರು ತಂದು ಇಲ್ಲಿನ ಐದು ದರ್ಗಾಗಳಿಗೆ ಪವಿತ್ರಜಲ ಅರ್ಪಿಸಿ ಮಳೆಗಾಗಿ ಪ್ರಾರ್ಥಿಸಿದರು.</p>.<p>ದರ್ಗಾಕ್ಕೆ ಭೇಟಿ ನೀಡಿದ ಸ್ವಾಮೀಜಿ ಭಕ್ತರಿಗೆ ಸಿಹಿ ಮಾದಲಿ ವಿತರಿಸಿ, ‘ಉತ್ತಮ ಮಳೆ, ಬೆಳೆಗಾಗಿ ದರ್ಗಾಗಳಲ್ಲಿ ಪೂಜೆ ಸಲ್ಲಿಸಿದ ರೈತರ ಆಸೆ ಫಲಿಸಲಿ’ ಎಂದು ಹಾರೈಸಿದರು.</p><p>ಮುಖಂಡರಾದ ಕಿರಲಿಂಗಪ್ಪ, ಶರಣಬಸವ ಹಣಿಗಿ, ರಾಜೇಶ ಬನ್ನಿಗಿಡದ, ಖಾಜಾಪಾಶಾ ಬ್ಯಾಗವಾಟ್, ಚಾಂದಪಾಶಾ, ರಫಿ ಒಂಟಿಬಂಡಿ, ಯಲ್ಲಪ್ಪ ಕೊಡ್ಲಿ, ಆಜಂಪಾಶಾ ಧಣಿ, ಶ್ರೀನಿವಾಸ ಗುತ್ತೇದಾರ ಮತ್ತಿತರರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>