<p><strong>ರಾಯಚೂರು</strong>: ‘ಇಲ್ಲಿನ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ರಿಮ್ಸ್)ಯಲ್ಲಿ ಟ್ಯೂಟರ್ ಹುದ್ದೆ ಹಾಗೂ ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಪ್ರಭಾರಿಗೆ ವಹಿಸಿಕೊಡಲಾಗಿದೆ. ಇದರಿಂದ ಬಡ ನಿರುದ್ಯೋಗಿಗಳನ್ನು ಕಡೆಗಣಿಸಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ರಾಜು ಪಟ್ಟಿ ಆರೋಪಿಸಿದರು.</p>.<p>‘ರಿಮ್ಸ್ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಆಡಳಿತ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಇದನ್ನು ಗಾಳಿಗೆ ತೂರಿ ಟ್ಯೂಟರ್ ಹುದ್ದೆ, ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಸೇರಿ ಅನೇಕ ಹುದ್ದೆ ಪ್ರಭಾರಿಗೆ ವಹಿಸಿಸಲಾಗಿದೆ. ಈ ಮೂಲಕ ರಿಮ್ಸ್ ನಿರ್ದೇಶಕರೇ ನಿಯಮ ಉಲ್ಲಂಘನೆ ಮಾಡಿದ್ದಾರೆ’ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.</p>.<p>‘ರಿಮ್ಸ್ ನಿರ್ದೇಶಕರು ಯಾವುದೇ ಭಯ, ಆತಂಕವಿಲ್ಲದೆ ನಿರಂತರವಾಗಿ ಆಕ್ರಮ ಎಸಗುತ್ತಿದ್ದಾರೆ. ನೇಮಕಾತಿ ನಿಯಮ ಪಾಲಿಸದೇ ಆಡಿಯೊಮೆಟ್ರಿ ತಂತ್ರಜ್ಞರ ಒಂದೇ ಹುದ್ದೆಗೆ ಇಬ್ಬರನ್ನು ನೇಮಿಸಿಕೊಂಡಿರುವುದು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.</p>.<p>‘ರಿಮ್ಸ್ ಆಸ್ಪತ್ರೆ ಅಧಿಕಾರಿಗಳು ಜಿಲ್ಲೆಯ ನಿರುದ್ಯೋಗ ಯುವಕರಿಗೆ ವಂಚನೆ ಮಾಡುವ ಮೂಲಕ ಪ್ರಭಾವಿಗಳಿಗೆ ಮಣೆ ಹಾಕುತ್ತಿದ್ದಾರೆ’ ಎಂದು ದೂರಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನರಸಿಂಹಲು, ವೈ.ನರಸಪ್ಪ, ಎಂ.ಆರ್. ಬೇರಿ, ಮಹೇಶ ಕುಮಾರ, ವಕೀಲ ಚಂದ್ರಶೇಖರ, ಭಾಸ್ಕರ್, ವಕೀಲ ಮಾರೆಪ್ಪ, ಪ್ರಸಾದ, ಪರಶುರಾಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಇಲ್ಲಿನ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ (ರಿಮ್ಸ್)ಯಲ್ಲಿ ಟ್ಯೂಟರ್ ಹುದ್ದೆ ಹಾಗೂ ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಪ್ರಭಾರಿಗೆ ವಹಿಸಿಕೊಡಲಾಗಿದೆ. ಇದರಿಂದ ಬಡ ನಿರುದ್ಯೋಗಿಗಳನ್ನು ಕಡೆಗಣಿಸಲಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ರಾಜು ಪಟ್ಟಿ ಆರೋಪಿಸಿದರು.</p>.<p>‘ರಿಮ್ಸ್ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಆಡಳಿತ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಇದನ್ನು ಗಾಳಿಗೆ ತೂರಿ ಟ್ಯೂಟರ್ ಹುದ್ದೆ, ಆಡಿಯೊಮೆಟ್ರಿ ತಂತ್ರಜ್ಞರ ಹುದ್ದೆ ಸೇರಿ ಅನೇಕ ಹುದ್ದೆ ಪ್ರಭಾರಿಗೆ ವಹಿಸಿಸಲಾಗಿದೆ. ಈ ಮೂಲಕ ರಿಮ್ಸ್ ನಿರ್ದೇಶಕರೇ ನಿಯಮ ಉಲ್ಲಂಘನೆ ಮಾಡಿದ್ದಾರೆ’ ಎಂದು ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.</p>.<p>‘ರಿಮ್ಸ್ ನಿರ್ದೇಶಕರು ಯಾವುದೇ ಭಯ, ಆತಂಕವಿಲ್ಲದೆ ನಿರಂತರವಾಗಿ ಆಕ್ರಮ ಎಸಗುತ್ತಿದ್ದಾರೆ. ನೇಮಕಾತಿ ನಿಯಮ ಪಾಲಿಸದೇ ಆಡಿಯೊಮೆಟ್ರಿ ತಂತ್ರಜ್ಞರ ಒಂದೇ ಹುದ್ದೆಗೆ ಇಬ್ಬರನ್ನು ನೇಮಿಸಿಕೊಂಡಿರುವುದು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.</p>.<p>‘ರಿಮ್ಸ್ ಆಸ್ಪತ್ರೆ ಅಧಿಕಾರಿಗಳು ಜಿಲ್ಲೆಯ ನಿರುದ್ಯೋಗ ಯುವಕರಿಗೆ ವಂಚನೆ ಮಾಡುವ ಮೂಲಕ ಪ್ರಭಾವಿಗಳಿಗೆ ಮಣೆ ಹಾಕುತ್ತಿದ್ದಾರೆ’ ಎಂದು ದೂರಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ನರಸಿಂಹಲು, ವೈ.ನರಸಪ್ಪ, ಎಂ.ಆರ್. ಬೇರಿ, ಮಹೇಶ ಕುಮಾರ, ವಕೀಲ ಚಂದ್ರಶೇಖರ, ಭಾಸ್ಕರ್, ವಕೀಲ ಮಾರೆಪ್ಪ, ಪ್ರಸಾದ, ಪರಶುರಾಮ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>