ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ತಾಯ್ತನ ಅರಿವಿಗಾಗಿ ಮ್ಯಾರಾಥಾನ್‌

Last Updated 11 ಏಪ್ರಿಲ್ 2022, 14:52 IST
ಅಕ್ಷರ ಗಾತ್ರ

ರಾಯಚೂರು: ಗರ್ಭೀಣಿಯರಿಗೆ ಪ್ರಸವದ ವೇಳೆ ಹಾಗೂ ಪ್ರಸವದ ನಂತರ ಸುರಕ್ಷಿತವಾದ ಆರೈಕೆ ದೊರಕಿಸಬೇಕು. ಇದರಿಂದ ಗರ್ಭೀಣಿಯರ ಸಾವು ತಡೆಗಟ್ಟಬಹುದು ಎಂಬುದರ ಕುರಿತು ಅರಿವು ಮೂಡಿಸುವುದಕ್ಕಾಗಿ ರಾಯಚೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದಿಂದ ಸೋಮವಾರ ಮ್ಯಾರಾಥಾನ್‌ ಆಯೋಜಿಸಲಾಗಿತ್ತು.

ಶಾಸಕ ಡಾ.ಶಿವರಾಜ ಪಾಟೀಲ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು.

ಐಎಂಎ ಸಭಾಂಗಣದವರೆಗೂ ನಡೆದ ಮ್ಯಾರಾಥಾನ್‌ನಲ್ಲಿ ರಾಯಚೂರಿನ ಮಹಿಳಾ ವೈದ್ಯರ ಸಂಘ ’ಸ್ಫೂರ್ತಿ‘ ಸದಸ್ಯೆಯರು, ರಿಮ್ಸ್‌ ಮತ್ತು ನವೋದಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ರಾಯಚೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ಮಂಗಳಾ ಗದ್ವಾಲ್‌, ಕಾರ್ಯದರ್ಶಿ ಡಾ.ಸುಷ್ಮಾ ಎಂ. ಮತ್ತಿತರರು ಮ್ಯಾರಾಥಾನ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT