ಮಂಡಲ ಅಧ್ಯಕ್ಷ ಸ್ಥಾನಕ್ಕೆ ಶರಣಬಸವ ಸೊಪ್ಪಿಮಠ ಸೇರಿದಂತೆ ಮಲ್ಲಿಕಾರ್ಜುನ ಯಾದವ ಹಾಗೂ ಕಿರಣ್ ಸಾನಬಾಳ ಅವರ ಹೆಸರು ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ಪಕ್ಷದ ವರಿಷ್ಠರು ಶರಣಬಸವ ಸೊಪ್ಪಿಮಠ ಅವರಿಗೆ ಜವಾಬ್ದಾರಿ ನೀಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದೆ.