ಎಣ್ಣೆಕಾಳು ಬೆಳೆಗಳು, ವಾಣಿಜ್ಯ ಬೆಳೆಗಳು, ಏಕದಳ ಧಾನ್ಯಗಳು ಹಾಗೂ ದ್ವಿದಳ ಧಾನ್ಯಗಳ ಬಿತ್ತನೆಯು ಕಾಲುವೆ ನೀರು ಹರಿಸಿದ ನಂತರವೇ ಪೂರ್ಣವಾಗಲಿದೆ. ಶೇಂಗಾ, ಸೂರ್ಯಕಾಂತಿ, ಔಡಲ, ಗುರೆಳ್ಳು, ಅಗಸೆ ಹಾಗೂ ಎಳ್ಳು ಬಿತ್ತನೆ ಶೇ 20ರಷ್ಟು, ಹತ್ತಿ ಶೇ 56 ರಷ್ಟು, ಭತ್ತ, ಜೋಳ, ಸಜ್ಜೆ ಹಾಗೂ ನವಣೆ ಶೇ 22 ರಷ್ಟು ಹಾಗೂ ತೊಗರಿ, ಹೆಸರು, ಉದ್ದು, ಹುರುಳಿ ಹಾಗೂ ಆಲಸಂದಿ ಶೇ 79 ರಷ್ಟು ಬಿತ್ತನೆಯಾಗಿದೆ.