<p><strong>ಮಸ್ಕಿ:</strong> ಶೈಕ್ಷಣಿಕ ರಜಾ ದಿನಗಳ ಈ ಸಂದರ್ಭದಲ್ಲಿ ದೇಶಿಯ ಸಂಸ್ಕೃತಿ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಪಟ್ಟಣದ ಕೇಂದ್ರ ಶಾಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಮಕ್ಕಳ ಬೇಸಿಗೆ ಸಂಭ್ರಮ-2025’ ಶಿಬಿರ ಇದೀಗ ಮಕ್ಕಳು ಹಾಗೂ ಪಾಲಕರ ಗಮನ ಸೆಳೆದಿದೆ.</p>.<p>ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಕಸಾಪ, ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಏ.10 ರಿಂದ 12 ರವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಪಟ್ಟಣದ ವಿವಿಧ ಶಾಲೆಗಳ 1ನೇ ತರಗತಿಯಿಂದ 10 ತರಗತಿ ವರೆಗಿನ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ.</p>.<p>ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುವ ಶಿಬಿರದಲ್ಲಿ ಎರಡು ತಂಡಗಳನ್ನು ಮಾಡಲಾಗಿದ್ದು 15 ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.</p>.<p>ಯೋಗ, ಧ್ಯಾನ, ನೃತ್ಯ, ಚಿತ್ರಕಲೆ ಜೊತೆಗೆ ದೇಶಿಯ ಕ್ರೀಢೆಗಳಾದ ಲಗೋರಿ, ಚಿನಿಮಿನಿ ಬಿಲ್ಲಿ, ಗೋಲಿಯಂತಹ ಜಾನಪದ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ.</p>.<p>ಸಾಮೂಹಿಕ ನೃತ್ಯ, ಜಾನಪದ ಹಾಡುಗಳು, ಮೋಜಿನ ಗಣಿತ, ಸೃಜನಶೀಲ ಬರವಣಿಗೆ, ಕಥೆ, ಕವನ ರಚನೆ, ರಂಗಾಟ ಸೇರಿದಂತೆ ಮುಂತಾದ ದೇಶಿಯ ಸಂಸ್ಕೃತಿಯನ್ನು ಕಲೆಗಳನ್ನು ಮಕ್ಕಳಿಗೆ ಮೂರು ದಿನದ ಶಿಬಿರದಲ್ಲಿ ಹೇಳಿ ಕೊಡಲಾಗುತ್ತಿದೆ.</p>.<p>‘ಮಕ್ಕಳ ಬೇಸಿಗೆ ಸಂಭ್ರಮ-2025’ ಪಟ್ಟಣದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಹಾಗೂ ಪಾಲಕರನ್ನು ಆಕರ್ಷಿಸುತ್ತಿದೆ. ಶಿಬಿರದ ಸಂಚಾಲಕರಾದ ಮಹೇಶ ಶೆಟ್ಟರ್, ರಾಮಸ್ವಾಮಿ, ವರದೇಂದ್ರ. ಕೆ. ಗುಂಡುರಾವ್ ದೇಸಾಯಿ ಅವರ ಕಾರ್ಯಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><blockquote>ಬೇಸಿಗೆಯಲ್ಲಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆದರೆ ದೇಶಿಯ ಸಂಸ್ಕೃತಿ ಹಾಗೂ ಕಲೆಯನ್ನು ಬಾಲ್ಯ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಸಲು ಸಹಕಾರಿಯಾಗುತ್ತದೆ</blockquote><span class="attribution"> ಗುಂಡುರಾವ್ ದೇಸಾಯಿ ಶಿಕ್ಷಕರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ:</strong> ಶೈಕ್ಷಣಿಕ ರಜಾ ದಿನಗಳ ಈ ಸಂದರ್ಭದಲ್ಲಿ ದೇಶಿಯ ಸಂಸ್ಕೃತಿ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಪಟ್ಟಣದ ಕೇಂದ್ರ ಶಾಲೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಮಕ್ಕಳ ಬೇಸಿಗೆ ಸಂಭ್ರಮ-2025’ ಶಿಬಿರ ಇದೀಗ ಮಕ್ಕಳು ಹಾಗೂ ಪಾಲಕರ ಗಮನ ಸೆಳೆದಿದೆ.</p>.<p>ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಕಸಾಪ, ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಏ.10 ರಿಂದ 12 ರವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ ಪಟ್ಟಣದ ವಿವಿಧ ಶಾಲೆಗಳ 1ನೇ ತರಗತಿಯಿಂದ 10 ತರಗತಿ ವರೆಗಿನ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದಾರೆ.</p>.<p>ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯುವ ಶಿಬಿರದಲ್ಲಿ ಎರಡು ತಂಡಗಳನ್ನು ಮಾಡಲಾಗಿದ್ದು 15 ಶಿಕ್ಷಕರು ಸ್ವಯಂ ಪ್ರೇರಿತರಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.</p>.<p>ಯೋಗ, ಧ್ಯಾನ, ನೃತ್ಯ, ಚಿತ್ರಕಲೆ ಜೊತೆಗೆ ದೇಶಿಯ ಕ್ರೀಢೆಗಳಾದ ಲಗೋರಿ, ಚಿನಿಮಿನಿ ಬಿಲ್ಲಿ, ಗೋಲಿಯಂತಹ ಜಾನಪದ ಆಟಗಳನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತಿದೆ.</p>.<p>ಸಾಮೂಹಿಕ ನೃತ್ಯ, ಜಾನಪದ ಹಾಡುಗಳು, ಮೋಜಿನ ಗಣಿತ, ಸೃಜನಶೀಲ ಬರವಣಿಗೆ, ಕಥೆ, ಕವನ ರಚನೆ, ರಂಗಾಟ ಸೇರಿದಂತೆ ಮುಂತಾದ ದೇಶಿಯ ಸಂಸ್ಕೃತಿಯನ್ನು ಕಲೆಗಳನ್ನು ಮಕ್ಕಳಿಗೆ ಮೂರು ದಿನದ ಶಿಬಿರದಲ್ಲಿ ಹೇಳಿ ಕೊಡಲಾಗುತ್ತಿದೆ.</p>.<p>‘ಮಕ್ಕಳ ಬೇಸಿಗೆ ಸಂಭ್ರಮ-2025’ ಪಟ್ಟಣದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಹಾಗೂ ಪಾಲಕರನ್ನು ಆಕರ್ಷಿಸುತ್ತಿದೆ. ಶಿಬಿರದ ಸಂಚಾಲಕರಾದ ಮಹೇಶ ಶೆಟ್ಟರ್, ರಾಮಸ್ವಾಮಿ, ವರದೇಂದ್ರ. ಕೆ. ಗುಂಡುರಾವ್ ದೇಸಾಯಿ ಅವರ ಕಾರ್ಯಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><blockquote>ಬೇಸಿಗೆಯಲ್ಲಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆದರೆ ದೇಶಿಯ ಸಂಸ್ಕೃತಿ ಹಾಗೂ ಕಲೆಯನ್ನು ಬಾಲ್ಯ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಸಲು ಸಹಕಾರಿಯಾಗುತ್ತದೆ</blockquote><span class="attribution"> ಗುಂಡುರಾವ್ ದೇಸಾಯಿ ಶಿಕ್ಷಕರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>