ರಾಯಚೂರು: ಜಿಲ್ಲೆಯಲ್ಲಿ ಹೊಸ ಕಲಾವಿದರಿಗೆ ಅವಕಾಶ ಒದಗಿಸಿ ಸಂಗೀತ ಕ್ಷೇತ್ರದ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ. ಶಿವರಾಜ ಪಾಟೀಲ ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲ ಞದಿನ್ನಿ ರಂಗಮಂದಿರದಲ್ಲಿ ಶನಿವಾರ ಸಂಜೆ ಆಕಾಶ್ ಕರೋಕೆ ಸ್ಟುಡಿಯೊ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡಮ್ಮನಿಗೆ ಸ್ವರ ನಮನ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಗ್ಯವಂತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀದೇವಿ ಆರ್.ವಿ.ನಾಯಕ ಮಾತನಾಡಿದರು.
ಪಲಗುಲ ನಾಗರಾಜ, ಡಾ. ರಿಯಾಜ್, ಸಿದ್ದೇಶ ವಿರಕ್ತ ಮಠ ಮಾತನಾಡಿದರು. ಎ.ಚಂದ್ರಶೇಖರ, ನರಸಪ್ಪ ಆಶಾಪುರ, ಡಾ.ಪುಷ್ಪಾವತಿ, ಬಿ. ಸುನೀಲ್ ಕುಮಾರ್, ಸುರೇಂದ್ರ ಕುಮಾರ, ನರಸಪ್ಪ ಆಶಾಪೂರ, ಶಾಂತಪ್ಪ ಇದ್ದರು. ಮಾರುತಿ ಬಡಿಗೇರ್ ಸ್ವಾಗತಿಸಿದರು. ವೆಂಕಟೇಶ ಹೂಗಾರ ನಿರೂಪಿಸಿದರು.