ಎನ್ಡಿಆರ್ಎಫ್ ತಂಡಗಳು ಕೂಡಾ ಪ್ರತ್ಯೇಕ ಬೋಟ್ ಗಳಲ್ಲಿ ಹುಡುಕಾಟ ಮಾಡುತ್ತಿದ್ದಾರೆ. ತೆಲಂಗಾಣ ಕರ್ನಾಟಕ ಗಡಿಭಾಗ ಜುರಾಲಾದಲ್ಲಿ 'ಪ್ರಿಯದರ್ಶಿನಿ' ಅಣೆಕಟ್ಟು ಇದೆ. ಅದರ ಹಿನ್ನೀರಿನಲ್ಲಿರುವ ಕುರ್ವಕಲಾ ನಡುಗಡ್ಡೆ ಗ್ರಾಮದಿಂದ ತೆಪ್ಪದಲ್ಲಿ 13 ಜನರು ತೆಲಂಗಾಣದ ಪಂಚಪಾಡುವಿಗೆ ಸಂತೆಗಾಗಿ ಹೋಗಿ ಮರಳುವಾಗ ಸೋಮವಾರ ಸಂಜೆ ಅದು ಮುಳುಗಡೆ ಆಗಿತ್ತು. 9 ಜನರು ಈಜಿ ಪಾರಾಗಿದ್ದಾರೆ. ಬಾಲಕಿ ಸೇರಿ ನಾಲ್ಕು ಜನರು ನೀರಿನಲ್ಲಿ ಕಣ್ಮರೆ ಆಗಿದ್ದಾರೆ.