<p>ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಡಾಲರ್ಸ್ ಕಾಲೊನಿ ಬಳಿ ಸೋಮವಾರ ರಾತ್ರಿ ತೌಡು ತುಂಬಿದ ಲಾರಿ ಪಲ್ಟಿಯಾಗಿ ನೀರಾವರಿ ಇಲಾಖೆಯ ಮೂವರು ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ಗಳಾದ ಲಿಂಗಸುಗೂರು ತಾಲ್ಲೂಕಿನ ಮಲ್ಲಿಕಾರ್ಜುನ ಸರ್ಜಾಪುರ (29), ಶಿವರಾಜಕುಮಾರ ಕುರಿರಾಂಪುರ (30) ಹಾಗೂ ಕಂಪ್ಯೂಟರ್ ಆಪರೇಟರ್ ಪಿಡ್ಬ್ಲೂಡಿ ಕ್ಯಾಂಪ್ ನಿವಾಸಿ ಮೆಹಬೂಬ (32) ಮೃತರು.</p><p>ಜವಾಳಗೇರದಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಂಧನೂರಿನ ಡಾಲರ್ಸ್ ಕಾಲೊನಿ ಬಳಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು. ಇದೇ ವೇಳೆ ರಾಯಚೂರು ಕಡೆಯಿಂದ ವೇಗವಾಗಿ ಬಂದ ತೌಡು ತುಂಬಿದ ಲಾರಿ ಏಕಾಏಕಿ ಪಲ್ಟಿಯಾಗಿ ಮೂವರ ಮೇಲೆ ಬಿದ್ದಿದೆ.</p><p>ಲಾರಿ ಚಾಲಕ ಬಾಷಾ, ಕ್ಲೀನರ್ ಮೆಹಬೂಬ್ ಅವರಿಗೂ ಗಂಭೀರ ಗಾಯಗಳಾಗಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಇವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.</p><p>ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p><strong>ಲೆಕ್ಕ ಸಹಾಯಕ ನಿಧನ</strong></p><p>ಜವಳಗೇರಾ ಉಪವಿಭಾಗದ ಇಬ್ಬರು ಕಿರಿಯ ಎಂಜನಿಯರ್ಗಳಾದ ಮಲ್ಲಿಕಾರ್ಜುನ, ಶಿವರಾಜಕುಮಾರ ಕುರಿ, ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ್ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಸ್ಥಳೀಯ ನೀರಾವರಿ ವಿಭಾಗೀಯ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮೈಮೂದ್ (53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.</p><p>ಇವರು ಕರ್ತವ್ಯ ನಿರ್ವಹಣೆಯ ಮೇರೆಗೆ ಮಾನವ ಸಂಪನ್ಮೂಲ ಸರಬರಾಜು ಕಾಮಗಾರಿಗಳ ಕುರಿತು ಧಾರವಾಡದ ಮೇಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ತೆರಳಿದ್ದರು. ಈ ವೇಳೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಲು ಟಿಕೆಟ್ ತೆಗೆಸುವ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳವಾರ ಮೃತರ ಕಳೆಬರವನ್ನು ತಂದು ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.</p><p><strong>ಇದ್ದೊಬ್ಬ ಮಗ ಹೋದ ಮೇಲೆ ನಾನೇಕೆ ಬದುಕಲಿ:</strong> ‘ದೇವರು ಇದ್ದೊಬ್ಬ ಮಗನನ್ನೇ ಕಸಿದುಕೊಂಡು ಬಿಟ್ಟ, ನಾನೇಕೆ ಬದುಕಲಿ, ನನ್ನನ್ನು ಮೇಲೆ ಕರ್ಕೊಂಡು ಬಿಡಪ್ಪ ದೇವರೆ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮೃತ ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ ಅವರ ತಂದೆ ಲಾಲ್ಸಾಬ್ ರೋಧನೆ ನೆರೆದಿದ್ದ ಜನರನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು.</p><p>‘ತಾನೇ ದುಡಿದು ಐದು ಮಂದಿ ಅಕ್ಕ-ತಂಗಿಯರ ಮದುವೆ ಮಾಡಿದ. ಒಂದು ದಿನನೂ ಜಗಳ ಆಡಲಿಲ್ಲ, ನಿತ್ಯ ನಮ್ಮ ಸುಖ-ದುಃಖ ಕೇಳುತ್ತಿದ್ದ. ಆರಾಮಿಲ್ಲಂದ್ರೆ ಡಾಕ್ಟರ್ ಹತ್ರ ಕರ್ಕೊಂಡು ಹೋಗುತ್ತಿದ್ದ. ಈಗ ಮಗ ಹೋದ ಮೇಲೆ ನಮ್ಗ್ಯಾರು ದಿಕ್ಕು, ನಾವ್ಹೇಗೆ ಬದುಕಬೇಕು, ನಮ್ಮನ್ನು ಯಾರು ಸಾಕುತ್ತಾರೆ’ ಎಂದು ಕಣ್ಣೀರು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಡಾಲರ್ಸ್ ಕಾಲೊನಿ ಬಳಿ ಸೋಮವಾರ ರಾತ್ರಿ ತೌಡು ತುಂಬಿದ ಲಾರಿ ಪಲ್ಟಿಯಾಗಿ ನೀರಾವರಿ ಇಲಾಖೆಯ ಮೂವರು ನೌಕರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ಗಳಾದ ಲಿಂಗಸುಗೂರು ತಾಲ್ಲೂಕಿನ ಮಲ್ಲಿಕಾರ್ಜುನ ಸರ್ಜಾಪುರ (29), ಶಿವರಾಜಕುಮಾರ ಕುರಿರಾಂಪುರ (30) ಹಾಗೂ ಕಂಪ್ಯೂಟರ್ ಆಪರೇಟರ್ ಪಿಡ್ಬ್ಲೂಡಿ ಕ್ಯಾಂಪ್ ನಿವಾಸಿ ಮೆಹಬೂಬ (32) ಮೃತರು.</p><p>ಜವಾಳಗೇರದಲ್ಲಿ ಕೆಲಸ ಮುಗಿಸಿಕೊಂಡು ಬರುವಾಗ ಸಿಂಧನೂರಿನ ಡಾಲರ್ಸ್ ಕಾಲೊನಿ ಬಳಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದರು. ಇದೇ ವೇಳೆ ರಾಯಚೂರು ಕಡೆಯಿಂದ ವೇಗವಾಗಿ ಬಂದ ತೌಡು ತುಂಬಿದ ಲಾರಿ ಏಕಾಏಕಿ ಪಲ್ಟಿಯಾಗಿ ಮೂವರ ಮೇಲೆ ಬಿದ್ದಿದೆ.</p><p>ಲಾರಿ ಚಾಲಕ ಬಾಷಾ, ಕ್ಲೀನರ್ ಮೆಹಬೂಬ್ ಅವರಿಗೂ ಗಂಭೀರ ಗಾಯಗಳಾಗಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಇವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.</p><p>ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p><strong>ಲೆಕ್ಕ ಸಹಾಯಕ ನಿಧನ</strong></p><p>ಜವಳಗೇರಾ ಉಪವಿಭಾಗದ ಇಬ್ಬರು ಕಿರಿಯ ಎಂಜನಿಯರ್ಗಳಾದ ಮಲ್ಲಿಕಾರ್ಜುನ, ಶಿವರಾಜಕುಮಾರ ಕುರಿ, ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ್ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಸ್ಥಳೀಯ ನೀರಾವರಿ ವಿಭಾಗೀಯ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮೈಮೂದ್ (53) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.</p><p>ಇವರು ಕರ್ತವ್ಯ ನಿರ್ವಹಣೆಯ ಮೇರೆಗೆ ಮಾನವ ಸಂಪನ್ಮೂಲ ಸರಬರಾಜು ಕಾಮಗಾರಿಗಳ ಕುರಿತು ಧಾರವಾಡದ ಮೇಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಲು ತೆರಳಿದ್ದರು. ಈ ವೇಳೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಲು ಟಿಕೆಟ್ ತೆಗೆಸುವ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳವಾರ ಮೃತರ ಕಳೆಬರವನ್ನು ತಂದು ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.</p><p><strong>ಇದ್ದೊಬ್ಬ ಮಗ ಹೋದ ಮೇಲೆ ನಾನೇಕೆ ಬದುಕಲಿ:</strong> ‘ದೇವರು ಇದ್ದೊಬ್ಬ ಮಗನನ್ನೇ ಕಸಿದುಕೊಂಡು ಬಿಟ್ಟ, ನಾನೇಕೆ ಬದುಕಲಿ, ನನ್ನನ್ನು ಮೇಲೆ ಕರ್ಕೊಂಡು ಬಿಡಪ್ಪ ದೇವರೆ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮೃತ ಕಂಪ್ಯೂಟರ್ ಆಪರೇಟರ್ ಮಹೆಬೂಬ್ಸಾಬ ಅವರ ತಂದೆ ಲಾಲ್ಸಾಬ್ ರೋಧನೆ ನೆರೆದಿದ್ದ ಜನರನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು.</p><p>‘ತಾನೇ ದುಡಿದು ಐದು ಮಂದಿ ಅಕ್ಕ-ತಂಗಿಯರ ಮದುವೆ ಮಾಡಿದ. ಒಂದು ದಿನನೂ ಜಗಳ ಆಡಲಿಲ್ಲ, ನಿತ್ಯ ನಮ್ಮ ಸುಖ-ದುಃಖ ಕೇಳುತ್ತಿದ್ದ. ಆರಾಮಿಲ್ಲಂದ್ರೆ ಡಾಕ್ಟರ್ ಹತ್ರ ಕರ್ಕೊಂಡು ಹೋಗುತ್ತಿದ್ದ. ಈಗ ಮಗ ಹೋದ ಮೇಲೆ ನಮ್ಗ್ಯಾರು ದಿಕ್ಕು, ನಾವ್ಹೇಗೆ ಬದುಕಬೇಕು, ನಮ್ಮನ್ನು ಯಾರು ಸಾಕುತ್ತಾರೆ’ ಎಂದು ಕಣ್ಣೀರು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>