ಸಿಂಧನೂರಿನಿಂದ ರೈಲು ಸಂಚಾರ ಆರಂಭವಾಗುವ ಮೂಲಕ ಮೂರು ದಶಕಗಳ ಕನಸು ನನಸಾಗಿ ಈ ಭಾಗದ ಜನರಲ್ಲಿ ಹರ್ಷ ತಂದಿದೆ. ಆದರೆ, ನಗರದಿಂದ ಒಂದುವರೆ ಕಿ.ಮೀ ದೂರದಲ್ಲಿರುವ ರೈಲ್ವೆ ಸ್ಟೇಷನ್ಗೆ ತೆರಳುವ ರಸ್ತೆಯು ಕಿರಿದಾಗಿದ್ದು, ಅದು ತೆಗ್ಗುದಿನ್ನೆಗಳಿಂದ ಕೂಡಿದೆ. ರೈತರು ಎತ್ತಿನ ಬಂಡಿ, ಟ್ರಾಕ್ಟರ್ ಮೂಲಕ ತಮ್ಮ ಹೊಲಗಳಿಗೆ ಹೋಗಲು ಈ ರಸ್ತೆ ಮಾಡಿಕೊಂಡಿದ್ದರು. ಕಪ್ಪು ಮಣ್ಣಿನ ರಸ್ತೆ ಇದಾಗಿದ್ದು, ಮಳೆ ಬಂದರೆ ಸಾಕು ಕೆಸರು ಗದ್ದೆಯಂತಾಗುತ್ತದೆ.