ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರ ಸೇವೆ ಮಾದರಿ ಎಂದು ಹೇಳಿದ್ದು ಗಮನಾರ್ಹ. ಇವರು ಕೊರೊನಾ ಹೋರಾಟದ ಯಶಸ್ವಿಗೆ ಆಧಾರ ಸ್ತಂಭವಾಗಿದ್ದಾರೆ. ಮನೆ ಮನಗೆ ಹೋಗಿ ಸ್ಕ್ರೀನಿಂಗ್, ತಪಾಸಣೆ, ಸೋಂಕಿತರ ಸಮೀಕ್ಷೆ ಇತ್ಯಾದಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇವರ ಕೆಲಸವನ್ನು ಗಮನಿಸಿ ಸನ್ಮಾನದಿಂದ ಗೌರವಿಸುತ್ತಿದೆ ವಿನಾವೇತನ ಹೆಚ್ಚಳಕ್ಕೆ ಮುಂದಾಗಿಲ್ಲ ಎಂದು ದೂರಿದರು.