<p>ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಯರಗೇರಾದಲ್ಲಿ ವಿನೋದ ಮಿಶ್ರಾ ಅವರ 27ನೇ ಸ್ಮರಣೆ ಕಾರ್ಯಕ್ರಮ ನಡೆಯಿತು.</p>.<p>ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಮುಖಂಡ ಅಜಿಜ್ ಜಾಗೀದಾರ್ ಮಾತನಾಡಿ 'ಸಿಪಿಐ(ಎಂ ಎಲ್) ಲಿಬರೇಶನ್ ಪಕ್ಷವು ಒಂದು ದೊಡ್ಡ, ಪ್ರಬಲ, ಚಲನಶೀಲ ಕಮ್ಯುನಿಸ್ಟ್ ಪಕ್ಷವಾಗಿ ಬೆಳೆಯಬೇಕೆಂದು ಅಪೇಕ್ಷಿಸಿದ್ದ ಹಿರಿಯ ನಾಯಕ ವಿನೋದ ಮಿಶ್ರಾ ಅವರು ದೇಶದಲ್ಲಿ ನೈಜ ಪ್ರಜಾಪ್ರಭುತ್ವ ವನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು’ ಎಂದರು.</p>.<p>‘ಅನೇಕ ಅಡೆತಡೆ ಗಳ ನಡುವೆಯೂ ಸ್ವಾತಂತ್ರ್ಯವನ್ನು ರಕ್ಷಿಸುವಂತಹ ದಿಟ್ಟ, ಬಲಾಡ್ಯ, ಪ್ರಬುದ್ಧ ಪಕ್ಷವಾಗಿ ರೂಪುಗೊಳ್ಳಬೇಕೆಂದು ಆಶಿಸಿದ್ದರು. ಪಕ್ಷವು ಪ್ರಜೆಗಳ ಧ್ವನಿಗೆ ಧ್ವನಿಯಾಗಿ, ಸಂಸದೀಯ ವಲಯದಲ್ಲೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಜನತೆಯ ಧ್ವನಿಯನ್ನು ಗಟ್ಟಿಗೊಳಿಸುವ</p>.<p>ನಿಟ್ಟಿನಲ್ಲಿ ತಮ್ಮ ಜೀವಿತಾವಧಿಯವರೆಗೂ ಅವಿರತವಾಗಿ ಕೆಲಸ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.</p>.<p>‘ಮುಂದೆ ಎದುರಾಗುವ ಮಹತ್ವದ ಜನ ಚಳವಳಿ ದಿನಗಳಿಗೆ ನಾವು ನಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸಿದ್ಧರಾಗಬೇಕು. ಹೊಸ ವರ್ಷದಲ್ಲಿ ನಮ್ಮ ಚಳವಳಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪಕ್ಷವನ್ನು ವಿಸ್ತರಿಸಿ, ಸಂಪೂರ್ಣ ಸಂಘಟನೆಯನ್ನು ಚೈತನ್ಯಗೊಳಿಸೋಣ‘ ಎಂದರು.</p>.<p>ಗ್ರಾಮ ಘಟಕದ ಅಧ್ಯಕ್ಷ ಹನೀಸ್ ಅಬಕಾರಿ, ಮುಖಂಡರಾದ ಜಗದೀಶ್, ಜಿಲಾನಿ ಪಾಷಾ, ಆಂಜನೇಯ, ದುಳ್ಳಯ್ಯ ನಾಯಕ್, ಅಬ್ರಾರ್ ಅಹಮದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ಸಿಪಿಐಎಂಎಲ್ ಲಿಬರೇಶನ್ ಪಕ್ಷದಿಂದ ಯರಗೇರಾದಲ್ಲಿ ವಿನೋದ ಮಿಶ್ರಾ ಅವರ 27ನೇ ಸ್ಮರಣೆ ಕಾರ್ಯಕ್ರಮ ನಡೆಯಿತು.</p>.<p>ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಮುಖಂಡ ಅಜಿಜ್ ಜಾಗೀದಾರ್ ಮಾತನಾಡಿ 'ಸಿಪಿಐ(ಎಂ ಎಲ್) ಲಿಬರೇಶನ್ ಪಕ್ಷವು ಒಂದು ದೊಡ್ಡ, ಪ್ರಬಲ, ಚಲನಶೀಲ ಕಮ್ಯುನಿಸ್ಟ್ ಪಕ್ಷವಾಗಿ ಬೆಳೆಯಬೇಕೆಂದು ಅಪೇಕ್ಷಿಸಿದ್ದ ಹಿರಿಯ ನಾಯಕ ವಿನೋದ ಮಿಶ್ರಾ ಅವರು ದೇಶದಲ್ಲಿ ನೈಜ ಪ್ರಜಾಪ್ರಭುತ್ವ ವನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು’ ಎಂದರು.</p>.<p>‘ಅನೇಕ ಅಡೆತಡೆ ಗಳ ನಡುವೆಯೂ ಸ್ವಾತಂತ್ರ್ಯವನ್ನು ರಕ್ಷಿಸುವಂತಹ ದಿಟ್ಟ, ಬಲಾಡ್ಯ, ಪ್ರಬುದ್ಧ ಪಕ್ಷವಾಗಿ ರೂಪುಗೊಳ್ಳಬೇಕೆಂದು ಆಶಿಸಿದ್ದರು. ಪಕ್ಷವು ಪ್ರಜೆಗಳ ಧ್ವನಿಗೆ ಧ್ವನಿಯಾಗಿ, ಸಂಸದೀಯ ವಲಯದಲ್ಲೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಜನತೆಯ ಧ್ವನಿಯನ್ನು ಗಟ್ಟಿಗೊಳಿಸುವ</p>.<p>ನಿಟ್ಟಿನಲ್ಲಿ ತಮ್ಮ ಜೀವಿತಾವಧಿಯವರೆಗೂ ಅವಿರತವಾಗಿ ಕೆಲಸ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.</p>.<p>‘ಮುಂದೆ ಎದುರಾಗುವ ಮಹತ್ವದ ಜನ ಚಳವಳಿ ದಿನಗಳಿಗೆ ನಾವು ನಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸಿದ್ಧರಾಗಬೇಕು. ಹೊಸ ವರ್ಷದಲ್ಲಿ ನಮ್ಮ ಚಳವಳಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪಕ್ಷವನ್ನು ವಿಸ್ತರಿಸಿ, ಸಂಪೂರ್ಣ ಸಂಘಟನೆಯನ್ನು ಚೈತನ್ಯಗೊಳಿಸೋಣ‘ ಎಂದರು.</p>.<p>ಗ್ರಾಮ ಘಟಕದ ಅಧ್ಯಕ್ಷ ಹನೀಸ್ ಅಬಕಾರಿ, ಮುಖಂಡರಾದ ಜಗದೀಶ್, ಜಿಲಾನಿ ಪಾಷಾ, ಆಂಜನೇಯ, ದುಳ್ಳಯ್ಯ ನಾಯಕ್, ಅಬ್ರಾರ್ ಅಹಮದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>