‘ನಾನು ಧೃತಿಗೆಡದೆ ಇಂದಿಗೂ ಈ ಕ್ಷೇತ್ರ ವ್ಯಾಪ್ತಿಯ ಪದವೀಧರರ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಸಕ್ರಿಯವಾಗಿದ್ದೇನೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲ ಏಳು ಜಿಲ್ಲೆಗಳನ್ನು ಒಳಗೊಂಡ ಸರ್ಕಾರಿ ನೌಕರರ ವೃಂದ ಮತ್ತು ನೇಮಕಾತಿ ಅಡಿಯಲ್ಲಿ (ಸಿ ಮತ್ತು ಆರ್, ರೂಲ್) 7 ಜಿಲ್ಲೆಗಳ ಮಟ್ಟಿಗೆ ಪ್ರತ್ಯೇಕ ನಿಯಮಾವಳಿ ರೂಪಿಸುತ್ತೇನೆ. 371 ಜೆ ಕಲಂ ಅನುಷ್ಠಾನ ಸಮಿತಿಯನ್ನು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚಿಸುತ್ತೇನೆ. ಸಮಿತಿಯಲ್ಲಿ 7 ಜಿಲ್ಲೆಗಳ ಆಯ್ದ ಚುನಾವಣಾ ಪ್ರತಿನಿಧಿಯ ಈ ಭಾಗದ ಸಂಪನ್ಮೂಲ ವ್ಯಕ್ತಿಗಳನ್ನು ಆಸಕ್ತ ತಜ್ಞರನ್ನು ಒಳಪಟ್ಟ ಸಮಿತಿಯನ್ನು ರಚಿಸಲಾಗುವುದು’ ಎಂದು ತಿಳಿಸಿದರು.