<p><strong>ಕವಿತಾಳ</strong>: ಆಧುನಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ಮೂಲಕ ಐದು ವರ್ಷಗಳ ಹಿಂದೆ ಸರ್ಕಾರ ಪರಿಚಯಿಸಿದ್ದ ಉಣ್ಣೆ ಕಟಾವು ಯಂತ್ರ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ.</p>.<p>ಅಂದಾಜು ₹2.5 ಲಕ್ಷ ಬೆಲೆ ಬಾಳುವ ಯಂತ್ರವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ವತಿಯಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಉಚಿತವಾಗಿ ನೀಡಲಾಗುತ್ತದೆ.</p>.<p>ಪ್ರತಿ ಕುರಿಯ ಉಣ್ಣೆ ತೆಗೆಯಲು ₹5 ನಿಗದಿ ಮಾಡಿದ್ದು ಅದರಲ್ಲಿ ನಿಗಮಕ್ಕೆ ₹2, ಸಹಕಾರಿ ಸಂಘಕ್ಕೆ ₹1 ಮತ್ತು ಯಂತ್ರದ ಆಪರೇಟರ್ಗೆ ₹2 ಪಡೆಯಲು ನಿಗಮ ನಿರ್ದೇಶಿಸಿದೆ. ಕುರಿಗಾಹಿಗಳಿಂದ ಪಡೆಯುವ ಎರಡು ರೂಪಾಯಿಯಲ್ಲಿ ಬ್ಲೇಡ್ ಬದಲಾವಣೆ ಸೇರಿ ಯಂತ್ರದ ನಿರ್ವಹಣೆ ಮಾಡಬೇಕು.</p>.<p>ಕತ್ತರಿ ಬಳಸಿ ತೆಗೆಯುತ್ತಿದ್ದ ಉಣ್ಣೆ ಅರೆಬರೆ ಬರುತ್ತಿದ್ದ ಕಾರಣ ಅದನ್ನು ಬಿಸಾಡುತ್ತಿದ್ದರು. ಸದ್ಯ ಈ ಯಂತ್ರ ಬಳಿಸಿ ಉಣ್ಣೆ ಕಟಾವು ಮಾಡಿದಾಗ ಸಂಪೂರ್ಣ ಉಣ್ಣೆ ಬರುತ್ತದೆ, ಸಮಯದ ಉಳಿತಾಯದ ಜತೆಗೆ ಉಣ್ಣೆ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಲಾಭ ಪಡೆಯಬಹುದು ಎನ್ನುವುದು ಸಹಕಾರ ಸಂಘಗಳ ಅನಿಸಿಕೆ.</p>.<div><blockquote>ಈ ಭಾಗದ ಕುರಿಗಳಲ್ಲಿ ಉಣ್ಣೆ ಉತ್ಪಾದನೆ ಕಡಿಮೆ. ಹೀಗಾಗಿ ಕುರಿಗಳಿಗೆ ಉಣ್ಣೆ ತೆಗೆದು ಕೀಟ ಬೀಳದಂತೆ ತಡೆಯಲು ಮಾತ್ರ ಯಂತ್ರ ಬಳಕೆಯಾಗುತ್ತಿದೆ. ಜಿಲ್ಲೆಯಲ್ಲಿ 13 ಸಂಘಗಳಿಗೆ ಯಂತ್ರ ವಿತರಣೆ ಮಾಡಲಾಗಿದೆ.</blockquote><span class="attribution">ಯಮನಪ್ಪ ವಾಲ್ಮೀಕಿ, ಸಹಾಯಕ ನಿರ್ದೇಶಕ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ರಾಯಚೂರು</span></div>.<p>‘ಒಂದು ಗಂಟೆ ಅವಧಿಯಲ್ಲಿ ಅಂದಾಜು 30 ರಿಂದ 40 ಕುರಿಗಳ ಉಣ್ಣೆ ತೆಗೆಯಬಹುದು. ಚರ್ಮಕ್ಕೆ ಗಾಯವಾಗುವುದಿಲ್ಲ, ಯಂತ್ರ ಬಳಕೆಯಿಂದ ಉದ್ದನೆಯ ಉಣ್ಣೆ ಬರುತ್ತದೆ ಅದನ್ನು ಪ್ರತಿ ಕೆ.ಜಿ. ಗೆ ₹70 ರಂತೆ ಸಂಘವೇ ಖರೀದಿಸುವುದರಿಂದ ಕುರಿಗಾಹಿಗಳಿಗೆ ಈ ಯಂತ್ರ ವರದಾನವಾಗಲಿದೆ’ ಎಂದು ಮಲ್ಲದಗುಡ್ಡದ ಅಮೋಘ ಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಹೇಳಿದರು.</p>.<p>‘ಕಂಬಳಿ ತಯಾರಿಕೆ ಜತೆಗೆ ಉಣ್ಣೆಯನ್ನು ತುಂಬಿದ ಗಾದೆ ರೂಪದ ಹಾಸಿಗೆ ಬಳಸಿ ಆಸ್ಪತ್ರೆಗಳಲ್ಲಿ ಆಕ್ಯೂಪಂಕ್ಚರ್ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕುರಿ ಉಣ್ಣೆಗೆ ಬೇಡಿಕೆ ಹೆಚ್ಚಿದೆ. ಯಂತ್ರದಿಂದ ಉಣ್ಣೆ ತೆಗೆದು ಮಾರಾಟ ಮಾಡಿದರೆ ಗ್ರಾಮೀಣ ಭಾಗದ ಕುರಿಗಾಹಿಗಳು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಮಲ್ಲಯ್ಯ ಅಭಿಪ್ರಾಯಪಟ್ಟರು.</p>.<p>‘ಯಂತ್ರ ಬಳಕೆಯಿಂದ ಸಲೀಸಾಗಿ ಉಣ್ಣೆ ತೆಗೆಯಲು ಸಾಧ್ಯವಾಯಿತು. ವಿದ್ಯುತ್ ಚಾಲಿತ ಯಂತ್ರವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಟ್ಟರೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಅಥವಾ ಸೋಲಾರ್ ವ್ಯವಸ್ಥೆಯಡಿ ಯಂತ್ರ ಬಳಸುವಂತಾದರೆ ಹೆಚ್ಚು ಉಪಯುಕ್ತವಾಗುತ್ತದೆ’ ಎಂದು ಕುರಿಗಾಹಿ ದೇವಣ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಆಧುನಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ಮೂಲಕ ಐದು ವರ್ಷಗಳ ಹಿಂದೆ ಸರ್ಕಾರ ಪರಿಚಯಿಸಿದ್ದ ಉಣ್ಣೆ ಕಟಾವು ಯಂತ್ರ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ.</p>.<p>ಅಂದಾಜು ₹2.5 ಲಕ್ಷ ಬೆಲೆ ಬಾಳುವ ಯಂತ್ರವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಮಗದ ವತಿಯಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಉಚಿತವಾಗಿ ನೀಡಲಾಗುತ್ತದೆ.</p>.<p>ಪ್ರತಿ ಕುರಿಯ ಉಣ್ಣೆ ತೆಗೆಯಲು ₹5 ನಿಗದಿ ಮಾಡಿದ್ದು ಅದರಲ್ಲಿ ನಿಗಮಕ್ಕೆ ₹2, ಸಹಕಾರಿ ಸಂಘಕ್ಕೆ ₹1 ಮತ್ತು ಯಂತ್ರದ ಆಪರೇಟರ್ಗೆ ₹2 ಪಡೆಯಲು ನಿಗಮ ನಿರ್ದೇಶಿಸಿದೆ. ಕುರಿಗಾಹಿಗಳಿಂದ ಪಡೆಯುವ ಎರಡು ರೂಪಾಯಿಯಲ್ಲಿ ಬ್ಲೇಡ್ ಬದಲಾವಣೆ ಸೇರಿ ಯಂತ್ರದ ನಿರ್ವಹಣೆ ಮಾಡಬೇಕು.</p>.<p>ಕತ್ತರಿ ಬಳಸಿ ತೆಗೆಯುತ್ತಿದ್ದ ಉಣ್ಣೆ ಅರೆಬರೆ ಬರುತ್ತಿದ್ದ ಕಾರಣ ಅದನ್ನು ಬಿಸಾಡುತ್ತಿದ್ದರು. ಸದ್ಯ ಈ ಯಂತ್ರ ಬಳಿಸಿ ಉಣ್ಣೆ ಕಟಾವು ಮಾಡಿದಾಗ ಸಂಪೂರ್ಣ ಉಣ್ಣೆ ಬರುತ್ತದೆ, ಸಮಯದ ಉಳಿತಾಯದ ಜತೆಗೆ ಉಣ್ಣೆ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಲಾಭ ಪಡೆಯಬಹುದು ಎನ್ನುವುದು ಸಹಕಾರ ಸಂಘಗಳ ಅನಿಸಿಕೆ.</p>.<div><blockquote>ಈ ಭಾಗದ ಕುರಿಗಳಲ್ಲಿ ಉಣ್ಣೆ ಉತ್ಪಾದನೆ ಕಡಿಮೆ. ಹೀಗಾಗಿ ಕುರಿಗಳಿಗೆ ಉಣ್ಣೆ ತೆಗೆದು ಕೀಟ ಬೀಳದಂತೆ ತಡೆಯಲು ಮಾತ್ರ ಯಂತ್ರ ಬಳಕೆಯಾಗುತ್ತಿದೆ. ಜಿಲ್ಲೆಯಲ್ಲಿ 13 ಸಂಘಗಳಿಗೆ ಯಂತ್ರ ವಿತರಣೆ ಮಾಡಲಾಗಿದೆ.</blockquote><span class="attribution">ಯಮನಪ್ಪ ವಾಲ್ಮೀಕಿ, ಸಹಾಯಕ ನಿರ್ದೇಶಕ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ರಾಯಚೂರು</span></div>.<p>‘ಒಂದು ಗಂಟೆ ಅವಧಿಯಲ್ಲಿ ಅಂದಾಜು 30 ರಿಂದ 40 ಕುರಿಗಳ ಉಣ್ಣೆ ತೆಗೆಯಬಹುದು. ಚರ್ಮಕ್ಕೆ ಗಾಯವಾಗುವುದಿಲ್ಲ, ಯಂತ್ರ ಬಳಕೆಯಿಂದ ಉದ್ದನೆಯ ಉಣ್ಣೆ ಬರುತ್ತದೆ ಅದನ್ನು ಪ್ರತಿ ಕೆ.ಜಿ. ಗೆ ₹70 ರಂತೆ ಸಂಘವೇ ಖರೀದಿಸುವುದರಿಂದ ಕುರಿಗಾಹಿಗಳಿಗೆ ಈ ಯಂತ್ರ ವರದಾನವಾಗಲಿದೆ’ ಎಂದು ಮಲ್ಲದಗುಡ್ಡದ ಅಮೋಘ ಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಹೇಳಿದರು.</p>.<p>‘ಕಂಬಳಿ ತಯಾರಿಕೆ ಜತೆಗೆ ಉಣ್ಣೆಯನ್ನು ತುಂಬಿದ ಗಾದೆ ರೂಪದ ಹಾಸಿಗೆ ಬಳಸಿ ಆಸ್ಪತ್ರೆಗಳಲ್ಲಿ ಆಕ್ಯೂಪಂಕ್ಚರ್ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕುರಿ ಉಣ್ಣೆಗೆ ಬೇಡಿಕೆ ಹೆಚ್ಚಿದೆ. ಯಂತ್ರದಿಂದ ಉಣ್ಣೆ ತೆಗೆದು ಮಾರಾಟ ಮಾಡಿದರೆ ಗ್ರಾಮೀಣ ಭಾಗದ ಕುರಿಗಾಹಿಗಳು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಮಲ್ಲಯ್ಯ ಅಭಿಪ್ರಾಯಪಟ್ಟರು.</p>.<p>‘ಯಂತ್ರ ಬಳಕೆಯಿಂದ ಸಲೀಸಾಗಿ ಉಣ್ಣೆ ತೆಗೆಯಲು ಸಾಧ್ಯವಾಯಿತು. ವಿದ್ಯುತ್ ಚಾಲಿತ ಯಂತ್ರವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈಕೊಟ್ಟರೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಅಥವಾ ಸೋಲಾರ್ ವ್ಯವಸ್ಥೆಯಡಿ ಯಂತ್ರ ಬಳಸುವಂತಾದರೆ ಹೆಚ್ಚು ಉಪಯುಕ್ತವಾಗುತ್ತದೆ’ ಎಂದು ಕುರಿಗಾಹಿ ದೇವಣ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>