<p><strong>ತುರ್ವಿಹಾಳ:</strong> ಪೂರಕ ವಾತಾವರಣದ ಕೊರತೆಯಿಂದಾಗಿ ಈ ಬಾರಿ ಕಡಲೆ ಬೆಳೆಗೆ ಹಳದಿ ರೋಗದ ಬಾಧೆ ಆವರಿಸಿದ್ದು, ಇದರಿಂದಾಗಿ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರಲ್ಲಿ ಮೂಡುತ್ತಿದೆ.</p><p>ಇಲ್ಲಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ತುರ್ವಿಹಾಳ ಪಟ್ಟಣ ಅರ್ಧ ಭಾಗ, ಗುಂಡಾ, ಊಮಲೂಟಿ, ಕಲಮಂಗಿ, ಹತ್ತಿಗುಡ್ಡ, ಚಿಕ್ಕವೇರ್ಗಿ, ಹಿರೇಬೇರ್ಗಿ, ಭೋಗಾಪೂರ, ಬಪೂರ ಇತರೆ ಒಟ್ಟು 20 ಗ್ರಾಮಗಳಲ್ಲಿ ಮಳೆಯನ್ನು ಅವಲಂಬಿಸಿ ಬೇಸಾಯ ಮಾಡುತ್ತಿದ್ದಾರೆ.</p><p>ಈ ಗ್ರಾಮಗಳ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಕಡಲೆ ಬೆಳೆಗೆ ಪ್ರತಿಕೂಲ ವಾತಾವರಣ ಉಂಟಾಗಿ ಹಳದಿ ರೋಗ, ನೆಟೆರೋಗ ಬಂದು ಗಿಡಗಳು ಒಣಗಿ ಹೋಗುತ್ತಿವೆ. ಕಡಲೆ ಬೆಳೆದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯ ಭೀತಿ ಕಾಡುತ್ತಿದೆ.</p><p>ಕಳೆದ ವರ್ಷ ಬರಗಾಲದಲ್ಲೂ ಪ್ರತಿ ಎಕರೆಗೆ 7 ಕ್ವಿಂಟಲ್ ಕಡಲೆ ಬೆಳೆ ಇಳುವರಿ ಬಂದಿತ್ತು. ಜೊತೆಗೆ ಒಂದು ಕ್ವಿಂಟಲ್ಗೆ ₹6,000ರಿಂದ ₹6,500 ಮಾರಾಟ ಮಾಡಲಾಗಿತ್ತು. ಖರ್ಚು ಕಳೆದು ಸ್ವಲ್ಪ ಲಾಭ ಬಂದಿತ್ತು. ಈ ವರ್ಷ ಮಳೆ ಚೆನ್ನಾಗಿ ಬಂದಿದೆ ಆದರೆ ಚಳಿ ಇಲ್ಲದಾಗಿದೆ ಬರಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಕಡಲೆ ಗಿಡಗಳಿಗೆ ತೇವಾಂಶ ಹೆಚ್ಚಾಗಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಒಣಗಿ ಹೋಗುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.</p><p>ಈಗಾಗಲೇ ಬೀಜ ಗೊಬ್ಬರ ಹಾಗೂ ಬಿತ್ತನೆ ಕಾರ್ಯ ಸೇರಿದಂತೆ ಪ್ರತಿ ಎಕರೆಗೆ ₹10 ಸಾವಿರದಂತೆ ಖರ್ಚು ಮಾಡಲಾಗಿದೆ. ಇನ್ನೂ ಮುಂದೆ ಮೋಡಕವಿದ ವಾತಾವರಣ ಮುಂದುವರಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ ಎನ್ನುತ್ತಾರೆ ರೈತರು.</p>.<div><blockquote>ಕಡಲೆಗೆ ಬಿತ್ತನೆ ಮೊದಲೇ ಮಳೆಯಾದರೆ ಸಾಕು, ಹಂತ ಹಂತವಾಗಿ ಕೀಟನಾಶಕ ಸಿಂಪಡಿಸಿದರೆ ಉತ್ತಮ ಫಸಲು ಬರುತ್ತದೆ. ಮೋಡಕವಿದ ವಾತಾವರಣದಿಂದ ರೋಗ ಬರುತ್ತದೆ</blockquote><span class="attribution">ಧರ್ಮಣ್ಣ ಕೃಷಿ ಅಧಿಕಾರಿ ತುರ್ವಿಹಾಳ</span></div>.<div><blockquote>ಈ ವರ್ಷ ಕಡಿಮೆ ಪ್ರಮಾಣದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಿದ್ದರಿಂದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಶಾಭಾವನೆ ಇತ್ತು. ವಾತಾವರಣ ವೈಪರಿತ್ಯದಿಂದ ಕಡಲೆ ಬೆಳೆ ಕೈಕೊಟ್ಟಿದೆ </blockquote><span class="attribution">ಮರಿಸ್ವಾಮಿ ನವಲಹಳ್ಳಿ ಸ್ಥಳೀಯ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರ್ವಿಹಾಳ:</strong> ಪೂರಕ ವಾತಾವರಣದ ಕೊರತೆಯಿಂದಾಗಿ ಈ ಬಾರಿ ಕಡಲೆ ಬೆಳೆಗೆ ಹಳದಿ ರೋಗದ ಬಾಧೆ ಆವರಿಸಿದ್ದು, ಇದರಿಂದಾಗಿ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರಲ್ಲಿ ಮೂಡುತ್ತಿದೆ.</p><p>ಇಲ್ಲಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ತುರ್ವಿಹಾಳ ಪಟ್ಟಣ ಅರ್ಧ ಭಾಗ, ಗುಂಡಾ, ಊಮಲೂಟಿ, ಕಲಮಂಗಿ, ಹತ್ತಿಗುಡ್ಡ, ಚಿಕ್ಕವೇರ್ಗಿ, ಹಿರೇಬೇರ್ಗಿ, ಭೋಗಾಪೂರ, ಬಪೂರ ಇತರೆ ಒಟ್ಟು 20 ಗ್ರಾಮಗಳಲ್ಲಿ ಮಳೆಯನ್ನು ಅವಲಂಬಿಸಿ ಬೇಸಾಯ ಮಾಡುತ್ತಿದ್ದಾರೆ.</p><p>ಈ ಗ್ರಾಮಗಳ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಕಡಲೆ ಬೆಳೆಗೆ ಪ್ರತಿಕೂಲ ವಾತಾವರಣ ಉಂಟಾಗಿ ಹಳದಿ ರೋಗ, ನೆಟೆರೋಗ ಬಂದು ಗಿಡಗಳು ಒಣಗಿ ಹೋಗುತ್ತಿವೆ. ಕಡಲೆ ಬೆಳೆದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯ ಭೀತಿ ಕಾಡುತ್ತಿದೆ.</p><p>ಕಳೆದ ವರ್ಷ ಬರಗಾಲದಲ್ಲೂ ಪ್ರತಿ ಎಕರೆಗೆ 7 ಕ್ವಿಂಟಲ್ ಕಡಲೆ ಬೆಳೆ ಇಳುವರಿ ಬಂದಿತ್ತು. ಜೊತೆಗೆ ಒಂದು ಕ್ವಿಂಟಲ್ಗೆ ₹6,000ರಿಂದ ₹6,500 ಮಾರಾಟ ಮಾಡಲಾಗಿತ್ತು. ಖರ್ಚು ಕಳೆದು ಸ್ವಲ್ಪ ಲಾಭ ಬಂದಿತ್ತು. ಈ ವರ್ಷ ಮಳೆ ಚೆನ್ನಾಗಿ ಬಂದಿದೆ ಆದರೆ ಚಳಿ ಇಲ್ಲದಾಗಿದೆ ಬರಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಕಡಲೆ ಗಿಡಗಳಿಗೆ ತೇವಾಂಶ ಹೆಚ್ಚಾಗಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಒಣಗಿ ಹೋಗುತ್ತಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.</p><p>ಈಗಾಗಲೇ ಬೀಜ ಗೊಬ್ಬರ ಹಾಗೂ ಬಿತ್ತನೆ ಕಾರ್ಯ ಸೇರಿದಂತೆ ಪ್ರತಿ ಎಕರೆಗೆ ₹10 ಸಾವಿರದಂತೆ ಖರ್ಚು ಮಾಡಲಾಗಿದೆ. ಇನ್ನೂ ಮುಂದೆ ಮೋಡಕವಿದ ವಾತಾವರಣ ಮುಂದುವರಿದರೆ ಬೆಳೆ ಸಂಪೂರ್ಣ ನಾಶವಾಗುತ್ತದೆ ಎನ್ನುತ್ತಾರೆ ರೈತರು.</p>.<div><blockquote>ಕಡಲೆಗೆ ಬಿತ್ತನೆ ಮೊದಲೇ ಮಳೆಯಾದರೆ ಸಾಕು, ಹಂತ ಹಂತವಾಗಿ ಕೀಟನಾಶಕ ಸಿಂಪಡಿಸಿದರೆ ಉತ್ತಮ ಫಸಲು ಬರುತ್ತದೆ. ಮೋಡಕವಿದ ವಾತಾವರಣದಿಂದ ರೋಗ ಬರುತ್ತದೆ</blockquote><span class="attribution">ಧರ್ಮಣ್ಣ ಕೃಷಿ ಅಧಿಕಾರಿ ತುರ್ವಿಹಾಳ</span></div>.<div><blockquote>ಈ ವರ್ಷ ಕಡಿಮೆ ಪ್ರಮಾಣದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಿದ್ದರಿಂದ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಆಶಾಭಾವನೆ ಇತ್ತು. ವಾತಾವರಣ ವೈಪರಿತ್ಯದಿಂದ ಕಡಲೆ ಬೆಳೆ ಕೈಕೊಟ್ಟಿದೆ </blockquote><span class="attribution">ಮರಿಸ್ವಾಮಿ ನವಲಹಳ್ಳಿ ಸ್ಥಳೀಯ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>