‘ಪರಿಶಿಷ್ಟ ಜಾತಿಯ ಯುವಕರು ಗುರುವಾರ ಜನ್ಮದಿನ ಆಚರಿಸಿಕೊಂಡಿದ್ದನ್ನು ಲಕ್ಷ್ಮಿಕಾಂತರೆಡ್ಡಿ, ಖಾದರ್ಸಾಬ್ ಮತ್ತು ಇಮಾಮ್ಸಾಬ್ಗೆ ಸಹಿಸಲು ಆಗಿರಲಿಲ್ಲ. ಪರಿಶಿಷ್ಟ ಜಾತಿಯವರನ್ನು ನಿಂದಿಸಿ, ಪ್ರಚೋದನಾಕಾರಿ ಮಾತುಗಳನ್ನಾಡಿ ಗಲಭೆ ಸೃಷ್ಟಿಸಿದ್ದರು. ಗಲಭೆಯಲ್ಲಿ ಗಾಯಗೊಂಡಿದ್ದ ಜಮದಗ್ನಿ ಶನಿವಾರ ಬೆಳಗಿನ ಜಾವ ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕ್ಯಾಂಪ್ನಲ್ಲಿ ಅಂತ್ಯಕ್ರಿಯೆ ನೆರವೇರಿತು’ ಎಂದು ಪೊಲೀಸರು ತಿಳಿಸಿದ್ದಾರೆ.