<p>ಜಾಲಹಳ್ಳಿ: ಪಟ್ಟಣ ಹಾಗೂ ಸುತ್ತಮತ್ತಲ್ಲಿನ ಗ್ರಾಮಗಳ ಭಕ್ತರ ಪ್ರಸಿದ್ದ ದೇವತೆ ಉತ್ತಿನ ಎಲ್ಲಮ್ಮನ ಜಾತ್ರೆ ಯನ್ನು ಡಿ.17ರಂದು ವಿಜೃಂಭಣೆಯಿಂದ ಜರುಗಲಿದೆ.<br /> <br /> ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿರುವ ಎಲ್ಲಮ್ಮ ದೇವತೆಯ ಮೂಲ ದೇವಸ್ಥಾನದಿಂದ ಹಂಪರಗುಂದಿ ಸೀಮಾಂತದಲ್ಲಿರುವ ಜಾತ್ರೆ ನಡೆಯುವ ದೇವಸ್ಥಾನಕ್ಕೆ ತಲುಪಿತ ನಂತರವಷ್ಟೇ ಜಾತ್ರೆಯ ಆರಂಭಗೊಳ್ಳುತ್ತದೆ.<br /> ಅಲ್ಲಿಯವರೆಗೂ ಭಕ್ತರು ಉಪವಾಸ ಇರುತತಾರೆ. ಪಲ್ಲಕ್ಕಿ ಬರುವವರೆಗೂ ದೇವತೆಗೆ ತರುವ ನೈವೇದ್ಯ ಹಾಗೂ ಕಾಣಿಕೆಗಳನ್ನು ಅರ್ಪಿಸುವುದಿಲ್ಲ.<br /> <br /> ಈ ಜಾತ್ರೆಗೆ ವಿಶೇಷವಾಗಿ ಭಕ್ತರು ಎಳ್ಳು ಹಚ್ಚಿದ ರೊಟ್ಟಿ, ಬದನೆ ಕಾಯಿ ಪಲ್ಯ, ಬುತ್ತಿ ತಂದು ದೇವತೆಗೆ ಪೂಜೆ ಸಲ್ಲಿಸಿದ ನಂತರ ಊಟ ಮಾಡಿ ಹೋಗುವ ವಾಡಿಕೆಯಿದೆ.<br /> <br /> ಇನ್ನೊಂದು ವಿಶೇಷತೆ ಎಂದರೆ ಈ ಜಾತ್ರೆ ಕೇವಲ ಒಂದು ದಿನ ನಡೆಯುತ್ತದೆ. ಜಾತ್ರೆ ನಡೆದ ದಿನದಂದು ಯಾರೂ ಅಲ್ಲಿ ವಾಸ ಮಾಡದೇ ರಾತ್ರಿ 10 ಗಂಟೆಯ ಒಳಗಾಗಿ ಎಲ್ಲರೂ ಪಟ್ಟಣ ಸೇರಿಕೊಳ್ಳುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣದ ‘ಬೀಸಲ್’ ವಂಶಸ್ಥರು ಈ ದೇವತೆಯ ಪೂಜಾರಿಗಳಾಗಿದ್ದು ಜಾತ್ರೆಗೆ ಮುಂಚೆ ಐದು ದಿನಗಳ ಕಾಲ ಕಾರ್ತಿಕ ಸೇವೆ ಮತ್ತು ಜಾತ್ರೆ ದಿನದಂದು ನಡೆಯುವ ಎಲ್ಲ ವಿಧಿವಿಧಾನಗಳನ್ನು ನೇರವೇರಿಸುತ್ತಾರೆ.<br /> <br /> ವಿಶೇಷತೆ: ಈ ಬಾರಿ ಜಾತ್ರೆಯ ಅಂಗವಾಗಿ ಪ್ರಥಮ ಬಾರಿಗೆ ರಥೋತ್ಸವ ಜರುಗಲಿರುವುದು ವಿಶೇಷವಾಗಿದೆ. ಸಂಜೆ 4 ಗಂಟೆಯ ನಂತರ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಾಲಹಳ್ಳಿ: ಪಟ್ಟಣ ಹಾಗೂ ಸುತ್ತಮತ್ತಲ್ಲಿನ ಗ್ರಾಮಗಳ ಭಕ್ತರ ಪ್ರಸಿದ್ದ ದೇವತೆ ಉತ್ತಿನ ಎಲ್ಲಮ್ಮನ ಜಾತ್ರೆ ಯನ್ನು ಡಿ.17ರಂದು ವಿಜೃಂಭಣೆಯಿಂದ ಜರುಗಲಿದೆ.<br /> <br /> ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿರುವ ಎಲ್ಲಮ್ಮ ದೇವತೆಯ ಮೂಲ ದೇವಸ್ಥಾನದಿಂದ ಹಂಪರಗುಂದಿ ಸೀಮಾಂತದಲ್ಲಿರುವ ಜಾತ್ರೆ ನಡೆಯುವ ದೇವಸ್ಥಾನಕ್ಕೆ ತಲುಪಿತ ನಂತರವಷ್ಟೇ ಜಾತ್ರೆಯ ಆರಂಭಗೊಳ್ಳುತ್ತದೆ.<br /> ಅಲ್ಲಿಯವರೆಗೂ ಭಕ್ತರು ಉಪವಾಸ ಇರುತತಾರೆ. ಪಲ್ಲಕ್ಕಿ ಬರುವವರೆಗೂ ದೇವತೆಗೆ ತರುವ ನೈವೇದ್ಯ ಹಾಗೂ ಕಾಣಿಕೆಗಳನ್ನು ಅರ್ಪಿಸುವುದಿಲ್ಲ.<br /> <br /> ಈ ಜಾತ್ರೆಗೆ ವಿಶೇಷವಾಗಿ ಭಕ್ತರು ಎಳ್ಳು ಹಚ್ಚಿದ ರೊಟ್ಟಿ, ಬದನೆ ಕಾಯಿ ಪಲ್ಯ, ಬುತ್ತಿ ತಂದು ದೇವತೆಗೆ ಪೂಜೆ ಸಲ್ಲಿಸಿದ ನಂತರ ಊಟ ಮಾಡಿ ಹೋಗುವ ವಾಡಿಕೆಯಿದೆ.<br /> <br /> ಇನ್ನೊಂದು ವಿಶೇಷತೆ ಎಂದರೆ ಈ ಜಾತ್ರೆ ಕೇವಲ ಒಂದು ದಿನ ನಡೆಯುತ್ತದೆ. ಜಾತ್ರೆ ನಡೆದ ದಿನದಂದು ಯಾರೂ ಅಲ್ಲಿ ವಾಸ ಮಾಡದೇ ರಾತ್ರಿ 10 ಗಂಟೆಯ ಒಳಗಾಗಿ ಎಲ್ಲರೂ ಪಟ್ಟಣ ಸೇರಿಕೊಳ್ಳುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣದ ‘ಬೀಸಲ್’ ವಂಶಸ್ಥರು ಈ ದೇವತೆಯ ಪೂಜಾರಿಗಳಾಗಿದ್ದು ಜಾತ್ರೆಗೆ ಮುಂಚೆ ಐದು ದಿನಗಳ ಕಾಲ ಕಾರ್ತಿಕ ಸೇವೆ ಮತ್ತು ಜಾತ್ರೆ ದಿನದಂದು ನಡೆಯುವ ಎಲ್ಲ ವಿಧಿವಿಧಾನಗಳನ್ನು ನೇರವೇರಿಸುತ್ತಾರೆ.<br /> <br /> ವಿಶೇಷತೆ: ಈ ಬಾರಿ ಜಾತ್ರೆಯ ಅಂಗವಾಗಿ ಪ್ರಥಮ ಬಾರಿಗೆ ರಥೋತ್ಸವ ಜರುಗಲಿರುವುದು ವಿಶೇಷವಾಗಿದೆ. ಸಂಜೆ 4 ಗಂಟೆಯ ನಂತರ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>