ಸೂಕ್ತ ನಿರ್ವಹಣೆ ಇಲ್ಲದೆ ಒಣಗುತ್ತಿರುವ ವೃಕ್ಷೊದ್ಯಾನದ ಒಳಭಾಗ
ವೃಕ್ಷೊದ್ಯಾನದ ಒಳಗಿನ ಪ್ರವಾಸಿಗರ ರಸ್ತೆಯ ಅವ್ಯವಸ್ಥೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷಿ ಉದ್ಯಾನ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಹೆದ್ದಾರಿ ಪಕ್ಕದಲ್ಲೇ ಉದ್ಯಾನ ಇರುವ ಕಾರಣ ಪ್ರವಾಸಿಗರನ್ನು ಸೆಳೆಯಲು ಇದು ಸೂಕ್ತವಾದ ಜಾಗವಾಗಿದೆ. ಇದರ ಜತೆಗೆ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಕೆಲವು ಜಾಗಗಳಿಗೆ ಸಫಾರಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೆ ಪ್ರವಾಸಿಗರನ್ನು ಸೆಳೆಯಬಹುದು
ವಿ.ಬಿ.ಚಂದ್ರು ವಂದಾರಗುಪ್ಪೆ ಚನ್ನಪಟ್ಟಣ
ಆರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉದ್ಯಾನ ಈ ರೀತಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಜಿಲ್ಲೆಯ ನಿವಾಸಿಗಳು ಸಹ ರಜಾ ದಿನ ಕಳೆಯಲು ಸೂಕ್ತವಾದ ಜಾಗ. ಉತ್ತಮ ಪ್ರವಾಸಿ ತಾಣವಾಗಿ ಮಾಡಬಹುದಾದ ಜಾಗವನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುವ ಅವಶ್ಯ ಇದೆ